The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ
The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ

ಟಿ20 ವಿಶ್ವಕಪ್: ಪಾಕಿಸ್ತಾನಕ್ಕೆ ಮತ್ತೆ ಸೋಲು-ಪಾಕ್ ವಿರುದ್ಧ 1 ರನ್ ರೋಚಕ ಜಯ ಸಾಧಿಸಿದ ಜಿಂಬಾಬ್ವೆ

by ದಿ ಸುಳ್ಯ ಮಿರರ್ ಸುದ್ದಿಜಾಲ October 27, 2022
by ದಿ ಸುಳ್ಯ ಮಿರರ್ ಸುದ್ದಿಜಾಲ October 27, 2022
Share this article

ಪರ್ತ್‌: ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ‘ಸೂಪರ್‌ 12’ ಹಂತದ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಬಲಿಷ್ಠ ಪಾಕಿಸ್ತಾನ ಎದುರು ಒಂದು ರನ್‌ ಅಂತರದ ರೋಚಕ ಜಯ ದಾಖಲಿಸಿದೆ.ಇಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪಾಕ್‌ ಬೌಲರ್‌ಗಳ ಕರಾರುವಾಕ್‌ ಬೌಲಿಂಗ್‌‌ಗೆ ನಲುಗಿದ ಜಿಂಬಾಬ್ವೆ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 130 ರನ್

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಗಳಿಸಿತು.ಈ ಗುರಿ ಬೆನ್ನತ್ತಿದ ಪಾಕಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ129 ರನ್ ಗಳಿಸಿ ಒಂದು ರನ್ ಸೋಲೊಪ್ಪಿಕೊಂಡಿತು.
ನಾಯಕ ಬಾಬರ್‌ ಅಜಂ (4) ಮತ್ತೊಮ್ಮೆ ವಿಫಲರಾದರು. ಮೊಹಮ್ಮದ್ ರಿಜ್ವಾನ್‌ (14) ಕೂಡ ನಿರಾಸೆ ಮೂಡಿಸಿದರು. ಬಳಿಕ ಬಂದ ಇಫ್ತಿಕಾರ್ ಅಹಮದ್ (5) ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ ಕೇವಲ 36ರನ್‌ ಗಳಿಸುವಷ್ಟರಲ್ಲೇ ಪ್ರಮುಖ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ಶಾನ್ ಮಸೂದ್ ಮತ್ತು ಶಾಬದ್ ಖಾನ್ ವಿಕೆಟ್ ಬೀಳದಂತೆ ಎಚ್ಚರಿಕೆಯ ಆಟವಾಡಿದರು. ಇವರಿಬ್ಬರು 4ನೇ ವಿಕೆಟ್ ಪಾಲುದಾರಿಕೆಯಲ್ಲಿ 52 ರನ್ ಕೂಡಿಸಿದರು. ಆದರೆ, 17 ರನ್ ಗಳಿಸಿದ್ದ ಶಾಬದ್‌ ಔಟಾಗುತ್ತಿದ್ದಂತೆ ಪಾಕ್ ಪಡೆ ಮತ್ತೆ ಕುಸಿಯಲಾರಂಭಿಸಿತು. 6ನೇ ಕ್ರಮಾಂಕದಲ್ಲಿ ಬಂದ ಹೈದರ್‌ ಅಲಿ ಶೂನ್ಯಕ್ಕೆ ಔಟಾದರು. ತಂಡದ ಮೊತ್ತ 94 ರನ್ ಆಗಿದ್ದಾಗ ಶಾನ್ ಮಸೂದ್ (44) ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ಜಿಂಬಾಬ್ವೆ ಸುಲಭ ಜಯದ ನಿರೀಕ್ಷೆಯಲ್ಲಿತ್ತು. ಆದರೆ, ಪಾಕ್ ಸುಲಭವಾಗಿ

ಸೋಲೊಪ್ಪಲಿಲ್ಲ.ಮೊಹಮ್ಮದ್ ನವಾಜ್ (22) ಮತ್ತು ಮೊಹಮ್ಮದ್ ವಾಸಿಂ ಜೂನಿಯರ್ (ಅಜೇಯ 18) ಪ್ರತಿರೋಧ ತೋರಿದರಾದರೂ ತಮ್ಮ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಕೊನೇ ಓವರ್‌ನ ಐದನೇ ಎಸೆತಗಳಲ್ಲಿ ನವಾಜ್‌ ವಿಕೆಟ್‌ ಒಪ್ಪಿಸಿದರು. ಅಂತಿಮ ಎಸೆತದಲ್ಲಿ ಮೂರು ರನ್ ಬೇಕಿದ್ದಾಗ ಶಾಹಿನ್‌ ಅಫ್ರಿದಿ (1) ರನೌಟ್‌ ಆದರು. ಹೀಗಾಗಿ ಪಾಕ್‌ ಪಡೆ 1 ರನ್ ಅಂತರದಿಂದ ಸೋಲೊಪ್ಪಿಕೊಳ್ಳಬೇಕಾಯಿತು. ಪಾಕ್ ಪರ ಅತ್ಯುತ್ತಮವಾಗಿ ಬೌಲಿಂಗ್‌ ಮಾಡಿದ ಮೊಹಮ್ಮದ್ ವಾಸಿಂ ಜೂನಿಯರ್‌ 4 ಓವರ್‌ಗಳಲ್ಲಿ 24 ರನ್‌ ಬಿಟ್ಟುಕೊಟ್ಟು 4 ವಿಕೆಟ್ ಕಬಳಿಸಿದರು. ಅವರಿಗೆ ಸಾಥ್‌ ನೀಡಿದ ಶಾಬದ್‌ ಖಾನ್‌ 3 ವಿಕೆಟ್‌ ಉರುಳಿಸಿದರೆ, ಹ್ಯಾರಿಸ್‌ ರವೂಫ್‌ ಒಂದು ವಿಕೆಟ್‌ ಕಿತ್ತರು.

ದಿ ಸುಳ್ಯ ಮಿರರ್ ಸುದ್ದಿಜಾಲ

ದಿ ಸುಳ್ಯ ಮಿರರ್‌ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್‌ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್‌ ಮಾಡಿರಿ.

previous post
ಕೊಲ್ಲಮೊಗ್ರ: ಮದ್ಯದಂಗಡಿ ವಿರುದ್ಧ ಪ್ರತಿಭಟನೆ
next post

You may also like

ಸಿಎಸ್​ಕೆ ಸ್ಟಾರ್ ಬ್ಯಾಟರ್ ಋತುರಾಜ್ ಗಾಯಕ್ವಾಡ್​- ಉತ್ಕರ್ಷ ಪವಾರ್ ಮದುವೆ...

June 4, 2023

ರೋಚಕ ಜಯದೊಂದಿಗೆ ಐದನೇ ಬಾರಿ ಐಪಿಎಲ್ ಪ್ರಶಸ್ತಿ ಪಡೆದ ಚೆನ್ನೈ...

May 30, 2023

ಸಾಯಿ ಸುದರ್ಶನ್ ಸ್ಪೋಟಕ ಇನ್ನಿಂಗ್ಸ್: ಚೆನ್ನೈಗೆ 215 ರನ್ ಗುರಿ...

May 29, 2023

ಮಳೆಯಿಂದ ಐಪಿಎಲ್ ಫೈನಲ್ ಮುಂದೂಡಿಕೆ: ಚೆನ್ನೈ– ಗುಜರಾತ್ ಫೈನಲ್‌ ಇಂದು

May 29, 2023

ಅಹಮದಾಬಾದ್‌ನಲ್ಲಿ ಭಾರೀ ಮಳೆ: ಚೆನ್ನೈ– ಗುಜರಾತ್ ಐಪಿಎಲ್ ಫೈನಲ್ ಪಂದ್ಯ...

May 28, 2023

ಐಪಿಎಲ್ ಫೈನಲ್‌ಗೆ ಕ್ಷಣ ಗಣನೆ: ಚೆನ್ನೈ vs ಗುಜರಾತ್ ಮಧ್ಯೆ...

May 28, 2023

ಐಪಿಎಲ್: ಶುಭಮನ್ ಗಿಲ್ ಭರ್ಜರಿ ಶತಕ, ಮೋಹಿತ್‌ಗೆ ಐದು ವಿಕೆಟ್:...

May 27, 2023

ಐಪಿಎಲ್ ಕ್ವಾಲಿಫೈಯರ್: ಶುಭ್‌ಮನ್ ಗಿಲ್ ಸ್ಪೋಟಕ ಶತಕ:ಮುಂಬೈ ವಿರುದ್ಧ ಗುಜರಾತ್...

May 26, 2023

ಮಂಗಳೂರು ವಿವಿ ಹಗ್ಗ ಜಗ್ಗಾಟ: ಎನ್‌ಎಂಸಿ ಚಾಂಪಿಯನ್: ಕಾಲೇಜಿನಲ್ಲಿ ಅದ್ದೂರಿ...

May 25, 2023

ಲಕ್ನೋ ವಿರುದ್ಧ ಭರ್ಜರಿ ಜಯ: ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಮುಂಬೈ...

May 25, 2023

Leave a Comment Cancel Reply

ಇತ್ತೀಚಿನ ಸುದ್ದಿಗಳು

  • ಸಿಎಸ್​ಕೆ ಸ್ಟಾರ್ ಬ್ಯಾಟರ್ ಋತುರಾಜ್ ಗಾಯಕ್ವಾಡ್​- ಉತ್ಕರ್ಷ ಪವಾರ್ ಮದುವೆ ಸಂಭ್ರಮ
  • ಕೇರಳದ ನರ್ಸ್‌ಗೆ ಒಲಿದ 45 ಕೋಟಿಯ ಅಬುಧಾಬಿ ಬಿಗ್ ಟಿಕೆಟ್ ಲಾಟರಿ ಅದೃಷ್ಟ
  • ಹಿಂದುತ್ವಕ್ಕಾಗಿ, ಸಮಾಜದ ಉಳಿವಿಗಾಗಿ ಯಾವ ತ್ಯಾಗಕ್ಕೂ ಸಿದ್ಧ:ಅರುಣ್ ಕುಮಾರ್ ಪುತ್ತಿಲ: ಲೋಕ‌ ಕಲ್ಯಾಣಾರ್ಥವಾಗಿ ಶ್ರೀ ಸತ್ಯನಾರಾಯಣ ಪೂಜೆ-ಧಾರ್ಮಿಕ ಸಭೆ
  • ಜಾಲ್ಸೂರಿಗೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ: ಅದ್ದೂರಿ ಸ್ವಾಗತ- ವೈಭವದ ಮೆರವಣಿಗೆ
  • ಮಾರ್ನಿಂಗ್ ಕ್ರಿಕೆಟ್‌ ಕ್ಲಬ್ ನೂತನ ಕಚೇರಿ ಉದ್ಘಾಟನೆ

ನಮ್ಮ ಬಗ್ಗೆ

ದಿ ಸುಳ್ಯ ಮಿರರ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು ವೃತ್ತಿಪರ ಪತ್ರಕರ್ತರ ತಂಡ ಸುದ್ದಿಗಳನ್ನು ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಮನ ಮುಟ್ಟುವಂತೆ ಧನಾತ್ಮಕ ದೃಷ್ಠಿಕೋನದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಜನಪರ, ಅಭಿವೃದ್ಧಿ ಪರ, ಪಾರದರ್ಶಕ ಮತ್ತು ಧನಾತ್ಮಕ ಪತ್ರಿಕೋದ್ಯಮ ನಮ್ಮ ಗುರಿ. ಜನರ ಆಶೋತ್ತರಗಳಿಗೆ ಧ್ವನಿಯಾಗುವ, ಸಮಸ್ಯೆಗಳಿಗೆ ಕನ್ನಡಿಯಾಗುವ ಆಶಯ ನಮ್ಮದು.ಗ್ರಾಮೀಣ ಭಾಗದಿಂದ ಆರಂಭಗೊಂಡು ಅಂತಾರಾಷ್ಟ್ರೀಯ ಮಟ್ಟದವರೆಗಿನ ಸುದ್ದಿಗಳ ಸಮೃದ್ಧಿಯ ಜೊತೆಗೆ, ವಿಶೇಷ ಲೇಖನಗಳು,ಮಾನವಸಾಕ್ತ ವರದಿಗಳು, ಹಿರಿಯ ಪತ್ರಕರ್ತರ, ಬರಹಗಾರರ ಅಂಕಣಗಳು ನಮ್ಮ ಮೀಡಿಯಾದಲ್ಲಿ ಓದುಗರನ್ನು ಮುಟ್ಟಲಿದೆ.

ಸಂಪರ್ಕಿಸಿ

ನಮ್ಮನ್ನು ಹೀಗೆ ಸಂಪರ್ಕಿಸಿ:

ಇ-ಮೇಲ್ ಐಡಿ: thesulliamirror@gmail.com
ದೂರವಾಣಿ ಸಂಖ್ಯೆ: 9008417480

ನಮ್ಮೊಂದಿಗೆ ಸಂಪರ್ಕದಲ್ಲಿರಿ

Facebook Twitter Whatsapp

2023 - Sullia Mirror. Website made with 🧡 by The Web People.

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ