ಸುಳ್ಯ:ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಸಹೀದ್ ತೆಕ್ಕಿಲ್ ಹಾಗು ಸುಳ್ಯ ನಗರ ಯೋಜನಾ ಪ್ರಾಧಿಕಾರ ಇದರ ಅಧ್ಯಕ್ಷ ಮುಸ್ತಫಾ ಸುಳ್ಯ ಇಂದು ಮಾಪಳಡ್ಕ ದರ್ಗಾ ಶರೀಫ್ಗೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಇರುವಂಬಳ್ಳ ಜಮಾಅತ್ ಹಾಗು ಮಾಪಳಡ್ಕ ದರ್ಗಾ ಶರೀಫ್ ಆಡಳಿತ ಸಮಿತಿಯ ವತಿಯಿಂದ
ಟಿ. ಎಂ. ಶಹೀದ್ ರವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಅವರಿಗೆ ಮಾಪಳಡ್ಕದಲ್ಲಿ ಸ್ತ್ರೀಯರ ನಮಾಝ್ ಕೊಠಡಿ,ಸ್ತ್ರೀಯರಿಗೆ ಪ್ರತ್ಯೇಕ ಕ್ಯಾಂಟೀನ್ ಹಾಗು ತಡೆಗೋಡೆ ಅಗತ್ಯತೆಯ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು.
ಇರುವಂಬಳ್ಳ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಕರ್ನಾಟಕ ಸರಕಾರದ ಸಂಬಂಧಪಟ್ಟ ಸಚಿವರಿಂದ ಅನುದಾನ ಒದಗಿಸಿಕೊಡುವಂತೆ ಸುಳ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಎ.ಬಿ.ಅಬ್ಬಾಸ್ ಅಡ್ಕ ರವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.ಈ ವಿಷಯದಲ್ಲಿ ಪ್ರಯತ್ನ ನಡೆಸುವುದಾಗಿ ಟಿ.ಎಂ.ಶಹೀದ್ ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುದರ್ರಿಸ್ ಹಾಫಿಳ್ ಅಬ್ದುಲ್ ಸಲಾಂ ನಿಝಾಮಿ, ಜಮಾಅತ್ ಅಧ್ಯಕ್ಷರಾದ ಎ.ಬಿ.ಅಶ್ರಫ್ ಸಅದಿ ಅಡ್ಕ, ಉಪಾಧ್ಯಕ್ಷರಾದ ಧರ್ಮತಣ್ಣಿ ಹಸೈನಾರ್ , ಪ್ರಧಾನ ಕಾರ್ಯದರ್ಶಿ ಟಿ.ಎಚ್.ಮುಹಮ್ಮದ್ ಕುಂಞಿ ಹಾಜಿ,ಕಾರ್ಯದರ್ಶಿ ಟಿ.ಎಚ್.ಅಬೂಬಕ್ಕರ್,ಸದಸ್ಯರಾದ ಅಂದುಂಞಿ ಗೋರಡ್ಕ ಹಾಗು ಗ್ಯಾರಂಟಿ ಅನುಷ್ಠಾನ ಸಮಿತಿ ಸುಳ್ಯ ಇದರ ಸದಸ್ಯರಾದ ಎ.ಬಿ.ಅಬ್ಬಾಸ್ ಅಡ್ಕ ಉಪಸ್ಥಿತಿತರಿದ್ದರು.












