ಸುಳ್ಯ: ಸುಳ್ಯದ ಕುರುಂಜಿಬಾಗ್ನಲ್ಲಿರುವ ಕೆ.ವಿ.ಜಿ.ಆರ್.ಪಿ. ಸ್ವಿಮ್ಮಿಂಗ್ ಪೂಲ್ನಲ್ಲಿ ಕಳೆದ 10 ದಿನಗಳಿಂದ ನಡೆದ ದಸರಾ ಈಜು ಶಿಬಿರ ಸಮಾರೋಪಗೊಂಡಿತು. ಕೆ.ವಿ.ಜಿ. ಚಾರಿಟೇಬಲ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾ ಪ್ರಸಾದ್ ಕೆ.ವಿ. ಯವರ ಆಶಯದಂತೆ, ಈಜುಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ದಸರಾ ಈಜು
ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಕೆ.ವಿ.ಜಿ. ಚಾರಿಟೇಬಲ್ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ. ಮಾತನಾಡಿ, ಸುಳ್ಯದಂತಹ ಪರಿಸರದಲ್ಲಿ ಈಜು ತರಬೇತಿ ಅತ್ಯವಶ್ಯಕ. ಪೋಷಕರು ತಮ್ಮ ಮಕ್ಕಳನ್ನು ಪಟ್ಟಣಗಳಿಗೆ ಕಳುಹಿಸದೆ ಎಲ್ಲಾ ಸೌಲಭ್ಯಗಳು ಸುಳ್ಯದಲ್ಲೇ ದೊರಕುವಂತಾಗಬೇಕೆಂದು ಅಭಿಪ್ರಾಯಪಟ್ಟರು. ಬಳಿಕ ಶಿಬಿರಾರ್ಥಿಗಳಿಗೆ ಸಾಧನಾಪತ್ರ ವಿತರಿಸಲಾಯಿತು. ತಾಲೂಕಿನ ವಿವಿಧ ಶಾಲೆಗಳ ಒಟ್ಟು 28 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೆ.ವಿ.ಜಿ.ಐ.ಪಿ.ಎಸ್.ನ ಪ್ರಾಂಶುಪಾಲ ಅರುಣ್ಕುಮಾರ್, ಈಜುಕೊಳ ನಿರ್ವಹಣಾ ಸಮಿತಿಯ ಅಧ್ಯಕ್ಷ ಡಾ. ಕುಸುಮಾಧರ್, ಈಜು ತರಬೇತುದಾರರುಗಳಾದ ಯಶವಂತಕುಮಾರ್ ಮತ್ತು ಫ್ರಾನ್ಸಿನ ಸಲೋಮಿ, ಪೋಷಕರು ಹಾಗು ಈಜುಕೊಳದ ಸಮಿತಿಯ ಸದಸ್ಯರು ಹಾಜರಿದ್ದರು.