ಸುಳ್ಯ:ಎಸ್ಕೆಎಸ್ಎಸ್ಎಫ್ ಅರಂತೋಡು ಶಾಖೆ ವತಿಯಿಂದ ಸ್ಥಾಪನಾ ದಿನಾಚರಣೆ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆ ಅಧ್ಯಕ್ಷ ಜುಬೈರ್ ವಹಿಸಿದರು. ಧ್ವಜಾರೋಹಣವನ್ನು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಅಶ್ರಫ್ ಗುಂಡಿ ನೆರವೇರಿಸಿ ಶುಭ
ಹಾರೈಸಿದರು. ನೌಫಾಲ್ ರಹ್ಮಾನ್ ಅಜ್ಹರಿ ದುವಾ ನೇರವೇರಿಸಿದರು. ಜುಮ್ಮಾ ಮಸೀದಿ ಕಾರ್ಯದರ್ಶಿ ಕೆ.ಎಂ. ಮುಸಾನ್, ಅಬೂಬಕ್ಕರ್ ಪಾರೆಕ್ಕಲ್,ಅಮೀರ್ ಕುಕ್ಕುಂಬಳ,ನಿವೃತ ಉಪನ್ಯಾಸಕ ಅಬ್ದುಲ್ಲಾ ಮಾಸ್ಟರ್, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಷನ್ ಅಧ್ಯಕ್ಷ ಮಜೀದ್,ಉಮ್ಮರ್ ಎ. ಎ.ಮುಜೀಬ್, ಸಂಸುದ್ದೀನ್ ಪೆಲ್ತಡ್ಕ, ಹನೀಫ್ ಎಸ್. ಇ, ತಾಜುದ್ದೀನ್ ಅರಂತೋಡು, ಮೋಯಿದು ಕುಟ್ಟಿ, ಎ.ಹಮೀದ್, ರಝಾಕ್ ಬಿಳಿಯಾರ್,ಅಕ್ಮಲ್ ಸೇರಿದಂತೆ ನುಸ್ರತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳು ಭಾಗವಹಿಸಿದರು. ಎಸ್ಕೆಎಸ್ಎಸ್ಎಫ್ ಕಾರ್ಯದರ್ಶಿ ಸಂಸುದ್ದಿನ್ ಸ್ವಾಗತಿಸಿ ತಾಜುದ್ದೀನ್ ಅರಂತೋಡು ವಂದಿಸಿದರು.