ಅಜ್ಜಾವರ: ಅಜ್ಜಾವರ ಗ್ರಾಮದ ಸಂಕೇಶ್ ಪೇರಾಲಿನಲ್ಲಿ ಅಬ್ದುಲ್ ಕುಂಞಿ ಸಂಕೇಶ್ ರವರ ನೇತೃತ್ವದಲ್ಲಿ ನಡೆಸಿಕೊಂಡು ಬರುತ್ತಿರುವ ಆಟ್ಟು ಉಪ್ಪಾಪ ಸ್ವಲಾತ್ ಮಜ್ಲಿಸ್ ವತಿಯಿಂದ ಸಯ್ಯದ್ ಆಟ್ಟು ತಂಙಳ್ ಆಂಡ್ ನೇರ್ಚೆ ಫೆಬ್ರವರಿ 19 ರಂದು ಪೇರಾಲಿನಲ್ಲಿ ನಡೆಯಿತು.
ಸಂಜೆ 7 ಗಂಟೆಗೆ ಮೌಲಿದ್ ಪಾರಾಯಣ ಮತ್ತು ದುವಾ ಮಜ್ಲೀಸ್ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಜ್ಲಿಸ್ ಸ್ಥಾಪಕಾಧ್ಯಕ್ಷ ಅಬ್ದುಲ್ ಕುಂಞಿ ಸಂಕೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಪ್ರಭಾಷಣಕಾರರಾಗಿ
ಭಾಗವಹಿಸಿದ್ದ ಕೇರಳದ ಸುಪ್ರಸಿದ್ಧ ವಾಗ್ಮಿ ಆಬಿದ್ ಹುದವಿ ತಚ್ಚನ್ನ ಧಾರ್ಮಿಕ ಪ್ರಭಾಷಣ ನೀಡಿದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಅಬ್ದುಲ್ ಅಝೀಝ್ ಸಖಾಫಿ ಕೇರಳ,ಹಾಫಿಲ್ ನಿಝಾಮ್ ಕೇರಳ, ನ್ಯಾಯವಾದಿ ಸುಕುಮಾರ್ ಕೋಡ್ತುಗುಳಿ, ಬ್ಲಾಕ್ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಮಹಮ್ಮದ್ ಸ್ವಲಾಹುದ್ದೀನ್ ರಹ್ಮಾನಿ ಮಲಪುರಂ, ವೈದ್ಯಕೀಯ ವಿದ್ಯಾರ್ಥಿ ನಿಹಾಲ್ ಕೋಡ್ತುಗುಳಿ ಮಾತನಾಡಿದರು.
ವೇದಿಕೆಯಲ್ಲಿ ಉದ್ಯಮಿ ಹಾಜಿ ಆದಂ ಕಮ್ಮಾಡಿ, ನುಸರತ್ ಸಿರಾಜ್, ಡಾ. ಮಹಮ್ಮದ್, ಹಿರಿಯರಾದ ಹಾಜಿ ಇಬ್ರಾಹಿಂ ಸಂಕೇಶ್, ಅಬ್ದುಲ್ಲಾ ಹಾಜಿ ಜಯನಗರ, ಅಂದುಂಞಿ ಗೋರಡ್ಕ, ಪತ್ರಕರ್ತ ಹಸೈನಾರ್ ಜಯನಗರ ಮೊದಲಾದವರು ಉಪಸ್ಥಿತರಿದ್ದರು.
ವಕೀಲರಾದ ಮೂಸಾ ಕುಂಞಿ ಪೈಂಬೆಚ್ಚಾಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ವಿವಿಧ ಭಾಗಗಳಿಂದ ನೂರಾರು ಮಂದಿ ಸಂಸ್ಥೆಯ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಿತು.