ಸುಳ್ಯ: ಪರಿಸರ ತಜ್ಞ ಗ್ರೀನ್ ಹೀರೋ ಆಫ್ ಇಂಡಿಯಾ ಡಾ. ಆರ್.ಕೆ.ನಾಯರ್ ಅವರು ಕೋಲ್ಚಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು. ಮಕ್ಕಳಿಗೆ ಪರಿಸರದ ಬಗ್ಗೆ ಮಾಹಿತಿ ನೀಡಿದರು. ಶಾಲೆಯ ಸುತ್ತಲಿನ ಪರಿಸರವನ್ನು ಮೆಚ್ಚಿಕೊಂಡು, ಶಾಲಾ ಕೊಠಡಿಗಳ ಸ್ವಚ್ಛತೆ, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಶಾಲಾ ಸಭಾಭವನ
ವೀಕ್ಷಿಸಿ, ಶಿಕ್ಷಕರ, ಎಸ್ ಡಿ ಎಂ ಸಿ,ಮತ್ತು ಪೋಷಕರ ಇಚ್ಚಾ ಶಕ್ತಿ ಇವುಗಳನ್ನು ಗಮನಿಸಿ ಸಭಾಭವನದ ಕೆಲಸಕ್ಕೆ ರೂ 1ಲಕ್ಷ ಸಹಾಯಧನ ನೀಡುವುದಾಗಿ ಘೋಷಿಸಿದರು. ಬಿಸಿಯೂಟ ಸವಿದು ಶಾಲೆಗೆ ಭೇಟಿ ನೀಡಿದ ಸವಿನೆನಪಿಗಾಗಿ ತೆಂಗಿನಗಿಡವನ್ನು ನೆಟ್ಟರು .

ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಸುದರ್ಶನ ಪಾತಿಕಲ್ಲು, ಗ್ರಾಮ ಪಂಚಾಯತ್ ಉಪಾಧ್ಯಕ್ಷರು ದಿನೇಶ್ ಕಣಕ್ಕೂರು, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಸೀತಾರಾಮ ಕೊಲ್ಲರಮೂಲೆ, ಎಸ್ ಡಿ ಎಂ ಸಿ ಉಪಾಧ್ಯಕ್ಷ ಹೇಮಾವತಿ ಕೊಯಿoಗಾಜೆ, ಸದಸ್ಯರಾದ ಕರುಣಾಕರ ಹಾಸ್ಪರೆ, ಜಗದೀಶ ಕೂಳಿಯಡ್ಕ, ಲಲಿತ ಕದಿಕಡ್ಕ, ಹೇಮಾವತಿ ಕದಿಕಡ್ಕ, ವಸಂತಿ ಕುಡೆಂಬಿ, ಪೋಷಕರಾದ ಶಿವಪ್ರಸಾದ್ ಕೊಲ್ಚಾರ್, ಪ್ರೇಮ ಹೊಸಗದ್ದೆ, ಶಿಕ್ಷಕರಾದ ಮಮತಾ ಕೆ.ವಿ , ವಿನುತಾ ಕೋಲ್ಚಾರು, ಸಹನಾ ಕೊಯಿಂಗಾಜೆ, ಅಡುಗೆ ಸಿಬ್ಬಂದಿ ಶೀಲಾವತಿ ಕೊನ್ನೊಡಿ,ಲೋಕೇಶ್ವರಿ ಕೋಲ್ಚಾರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಜಲಜಾಕ್ಷಿ ಪ್ರಸ್ತಾವನೆ ಮತ್ತು ಸ್ವಾಗತಿಸಿ ಶಿಕ್ಷಕ ರಂಗನಾಥ ಎಂ ಎಸ್ ವಂದಿಸಿದರು.