ಸುಳ್ಯ:ಭಾರತೀಯ ಮಜ್ದೂರ್ ಸಂಘ ಸಂಯೋಜಿತ ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಮಹಾಪೂಜೆ ಹಣ್ಣುಕಾಯಿ ನಡೆಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.ತಾಲೂಕಿನ ಎಲ್ಲಾ ಸದಸ್ಯರು,ಹಿತೈಷಿಗಳ ಶ್ರೇಯೋಭಿವೃದ್ಧಿಗಾಗಿ
ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಪ್ರಶಾಂತ್ ಭಟ್, ಪ್ರದಾನ ಕಾರ್ಯದರ್ಶಿ ನಾರಾಯಣ ಎಸ್ ಎಂ, ಶಾಂತಿನಗರ ಕೋಶಾಧಿಕಾರಿ ರವಿ ಎಸ್, ಮಾಜಿ ಅಧ್ಯಕ್ಷ ವಿಜಯ ಕುಮಾರ್ ಉಬರಡ್ಕ, ಜತೆ ಕಾರ್ಯದರ್ಶಿ ಸುರೇಂದ್ರ ಕಾಮತ್ ಜಯನಗರ, ನಿರ್ದೇಶಕಾರದ ಜನಾರ್ದನ, ವೇಣುಗೋಪಾಲ ನಾಯರ್, ಶಂಕರ, ಪ್ರದೀಪ, ಬಾನು ಪ್ರಕಾಶ್, ಲೋಕೇಶ್, ಚಾಮಯ್ಯ, ಚಂದ್ರ ಶೇಖರ ಮರ್ಕಂಜ, ರಾಧಾಕೃಷ್ಣ, ವಸಂತ, ನಿತ್ಯಾನಂದ, ಮೋಹನ, ಬಾಲಕೃಷ್ಣ, ಪ್ರವೀಣ್ ಕಡೋಡಿ ಮತ್ತಿತರರು ಉಪಸ್ಥಿತರಿದ್ದರು.












