ಸುಳ್ಯ:ಎರಡೂವರೆ ವರ್ಷಗಳಿಂದ ಸುಳ್ಯದಲ್ಲಿ ತಹಸೀಲ್ದಾರ್ ಆಗಿ ಕರ್ತವ್ಯನಿರ್ವಹಿಸಿರುವುದು ನನಗೆ ಅತೀವ ತೃಪ್ತಿ ತಂದಿದೆ ಜೀವನದಲ್ಲಿ ಮತ್ತು ಸರಕಾರಿ ಸೇವೆಯಲ್ಲಿ ದೊಡ್ಡ ಅನುಭವವನ್ನು ಪಡೆದಿದ್ದೇನೆ ಎಂದು ತಹಶೀಲ್ದಾರ್ ಅನಿತಾ ಲಕ್ಷ್ಮಿ ಹೇಳಿದ್ದಾರೆ. ವರ್ಗಾವಣೆಯಾಗಿರುವ ಹಿನ್ನಲೆಯಲ್ಲಿ ಸುಳ್ಯದ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಏರ್ಪಡಿಸಿದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಜನರು, ಜನಪ್ರತಿನಿಧಿಗಳು, ಎಲ್ಲಾ
ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಮಾಧ್ಯಮಗಳು ನೀಡಿದ ಸಹಕಾರ ಜೀವನದಲ್ಲಿ ಅವಿಸ್ಮರಣೀಯ. ಕೊರೋನ ಮಹಾಮಾರಿ,ಪ್ರಾಕೃತಿಕ ವಿಕೋಪ,ಕೋಮು ಉದ್ವಿಗ್ನತೆ, ಮೊದಲಾದ ಸವಾಲುಗಳನ್ನು ಎದುರಿಸಿ ನನ್ನ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿರುತ್ತೇನೆ ಎಂಬ ತೃಪ್ತಿ ಇದೆ. ನಿಮ್ಮಿಂದ ಆತ್ಮೀಯವಾಗಿ ಬೀಳ್ಕೊಡುತ್ತಿರುವುದು ಸುಳ್ಯ ದೊಂದಿಗೆ ನನ್ನ ಸಂಬಂಧ ವನ್ನು ಇನ್ನಷ್ಟು ಗಟ್ಟಿಯಾಗಿಸಿದೆ ಎಂದರು ಸುಳ್ಯ ಜನತೆ ತೋರಿದ ಪ್ರೀತಿ, ವಿಶ್ವಾಸ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಸಿಗುವ ಪದವಿಗಿಂತ ಮಿಗಿಲಾಗಿದೆ ಎಂದು ಭಾವುಕರಾಗಿ ನುಡಿದರು. ಸಭಾಧ್ಯಕ್ಷತೆಯನ್ನು ಇಂಡಿಯನ್ ರೆಡ್ ಕ್ರಾಸ್ ಸುಳ್ಯ ಘಟಕದ ಸಭಾಪತಿ ಪಿ. ಬಿ. ಸುಧಾಕರ್ ರೈ ವಹಿಸಿ ಮಾತನಾಡಿ ಸುಳ್ಯದಲ್ಲಿ ಸರಕಾರದ ಜನಪರ ಕಾರ್ಯಕ್ರಮಗಳನ್ನು
ಸಮರ್ಪಕವಾಗಿ ಜನರಿಗೆ ತಲುಪಿಸಿದ ಅನಿತಾಲಕ್ಷ್ಮಿಯವರು ರಕ್ತದಾನ ಶಿಬಿರ,ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ನೆರವಾಗುವ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸುಳ್ಯ ಘಟಕವನ್ನು ಪುನರುಜ್ಜೀವನಗೊಳಿಸಿದ್ದಾರೆ. ಘಟಕವನ್ನು ಕ್ರೀಯಾಶೀಲ ವಾಗುವಂತೆ ಮಾಡಿದ ಕೀರ್ತಿ ಇಂಡಿಯನ್ ರೆಡ್ ಕ್ರಾಸ್ನ ಪದನಿಮತ್ತ ಅಧ್ಯಕ್ಷರೂ ಆದ ಅನಿತಾಲಕ್ಶ್ಮಿ ಯವರಿಗೆ ಸಲ್ಲುತ್ತದೆ ಎಂದರು
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸುಳ್ಯ ಘಟಕದ ಉಪಸಭಾಪತಿ ಕೆ. ಎಂ. ಮುಸ್ತಫ ಅಭಿನಂದನಾ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಸುಳ್ಯ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಗಿರೀಶ್ ಡಿ. ಎಸ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ,ಇಂಡಿಯನ್ ರೆಡ್ ಕ್ರಾಸ್ ಸುಳ್ಯ ಘಟಕದ ಕೋಶಾಧಿಕಾರಿ ವಿನಯ್ ಕುಮಾರ್, ನಿರ್ದೇಶಕರಾದ ಪದ್ಮಿನಿ, ಪೃಥ್ವಿ ಕುಮಾರ್, ಸಂಜೀವ ಕುತ್ಪಾಜೆ, ಜಿಲ್ಲಾ ಪ್ರತಿನಿಧಿ ಗಣೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು. ಪ್ರದಾನ ಕಾರ್ಯದರ್ಶಿ ತಿಪ್ಪೇಶಪ್ಪ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು