ಪೆರಾಜೆ: ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆಯಲ್ಲಿ ಮಾ.10 ರಿಂದ ಕಾಲಾವಧಿ ಜಾತ್ರೋತ್ಸವ ಪ್ರಾರಂಭಗೊಂಡಿದ್ದು, ಏ.10ರವರೆಗೆ ನಡೆಯಲಿದೆ. ಏ.1ರಂದು ಭಗವತಿಯ ದೊಡ್ಡಮುಡಿ ನಡೆಯಲಿದೆ. ಜಾತ್ರೋತ್ಸವದ ಅಂಗವಾಗಿ ಮಾ.25ರಂದು ಪೂ.9ಕ್ಕೆ ಉಗ್ರಾಣ ತುಂಬಿಸುವುದು, ಮಾ.26 ರಂದು ಪೂ.11 ರಿಂದ ಕಲಶೋತ್ಸವ, ಮಹಾಪೂಜೆ, ಮಹಾಸಮಾರಾಧನೆ, ಅ.4ಕ್ಕೆ ಶ್ರೀ ಉಳ್ಳಾಕುಲು ಮಾಡದ ಅರಮನೆಯಿಂದ ಭಂಡಾರ ತರುವುದು, ಅ.5ಕ್ಕೆ ಮುಖ ತೋರಣ ಏರಿಸುವುದು, 5.30ಕ್ಕೆ ಶಿಸ್ತು ಅಳೆಯುವುದು, 7.45 ರಿಂದ ದೇವರ
ಶ್ರೀಭೂತ ಬಲಿ, ದೇವರ ನೃತ್ಯ ಬಲಿ, ಕಟ್ಟೆ ಪೂಜೆ, ಮಾ.27 ರಂದು ಬೆ.8.40ರಿಂದ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ರಾತ್ರಿ 8 ರಿಂದ ತುಳು ಕೋಲದ ಬೆಳ್ಳಾಟ, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ , ತುಳು ಕೋಲ ತಿರುವಪ್ಪಗಳು, ಮಾ.28ರಂದು ಮಧ್ಯಾಹ್ನ 12 ರಿಂದ ಬೇಟೆ ಕರಿಮಗನ್ ಈಶ್ವರನ್ ದೈವ, ರಾತ್ರಿ 8ರಿಂದ ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲ ಬೆಳ್ಳಾಟ ಮತ್ತು ಅವುಗಳ ತಿರುವಪ್ಪಗಳು.

ಮಾ.29 ರಂದು ಮಧ್ಯಾಹ್ನ 12 ರಿಂದ ಬೇಟೆಕರಿಮಗನ್ ಈಶ್ವರ ದೈವ, ರಾತ್ರಿ 7.40ರಿಂದ ಪಳ್ಳಿಯರ ಬಾಗಿಲು ತೆರೆಯುವುದು, ಕರಿಂತಿರಿ ನಾಯರ್, ಪುಲಿಮಾರುತನ್ ದೈವಗಳ ಬೆಳ್ಳಾಟಗಳು,ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲದ ಬೆಳ್ಳಾಟಗಳು ಮತ್ತು ಅವುಗಳ ತಿರುವಪ್ಪಗಳು ನಡೆಯಲಿದೆ. ಮಾ.30 ರಂದು ಪೂ.10ರಿಂದ ಕರಿಂತಿರಿ ನಾಯರ್ ದೈವ, ಪುಲಿಮಾರುತನ್ ದೈವ, ಬೇಟೆ ಕರಿಮಗನ್ ಈಶ್ವರನ್ ದೈವ. ರಾತ್ರಿ 8 ರಿಂದ ಕಾಳಪುಲಿಯನ್ ಮತ್ತು ಪುಲಿಕಂಡನ್ ದೈವಗಳ ಬೆಳ್ಳಾಟಗಳು ನಂತರ ತುಳು ಕೋಲಗಳ ಬೆಳ್ಳಾಟ, ಬೇಟೆ ಕರಿಮಗನ್ ಈಶ್ವರನ್ ದೈವದ ಬೆಳ್ಳಾಟ, ತುಳು ಕೋಲಗಳ ತಿರುವಪ್ಪಗಳು ನಡೆಯಲಿದೆ.

ಮಾ.31ರಂದು ಪೂ.8 ರಿಂದ ಕಾಳಪುಲಿಯನ್ ಮತ್ತು ಪುಲಿಕಂಡನ್ ದೈವಗಳು, ಬೇಟೆ ಕರಿಮಗನ್ ಈಶ್ವರನ್ ದೈವ. ರಾತ್ರಿ 7.30ರಿಂದ ಭಗವತಿ ದೇವಿ ಸಮಾರಾಧನೆ, ರಾತ್ರಿ 8ರಿಂದ ಪುಲ್ಲೂರ್ ಕಣ್ಣನ್ ದೈವಗಳ ಬೆಳ್ಳಾಟ, ತುಳು ಕೋಲಗಳ ಬೆಳ್ಳಾಟ, ಮಲೆಕಾರಿ ಬೆಳ್ಳಾಟ, ವಿಷ್ಣುಮೂರ್ತಿ, ರಕ್ತೇಶ್ವರಿ, ಪೊಟ್ಟನ್ ದೈವ ತೊಡಂಙಲ್, ಬೇಟೆ ಕರಿಮಗನ್ ಬೆಳ್ಳಾಟ, ಭಗವತಿ ಕಲಶ ಬರುವುದು ಮತ್ತು ಭಗವತಿ ತೋಟ್ಟಂ, ಆಯರ್ ಭಗವತಿ ತೋಟ್ಟಂ, ಪುಲ್ಲೂರು ಕಾಳಿ ತೋಟ್ಟಂ, ತುಳು ಕೋಲ ಮತ್ತು ಮಲೆಕಾರಿ ತಿರುವಪ್ಪಗಳು. ಏ.1ರಂದು ಬೆಳಿಗ್ಗೆ 6 ರಿಂದ ಪೊಟ್ಟನ್ ದೈವ, ರಕ್ತೇಶ್ವರಿ, ಆಯರ್ ಭಗವತಿ, ಪುಲ್ಲೂರು ಕಾಳಿ, ಪುಲ್ಲೂರು ಕಣ್ಣನ್, ವಿಷ್ಣುಮೂರ್ತಿ, ಬೇಟೆ ಕರಿಮಗನ್ ಈಶ್ವರನ್ ದೈವ, 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಅಪರಾಹ್ನ ಗಂಟೆ 4 ಕ್ಕೆ ಶ್ರೀ ಭಗವತಿ ದೊಡ್ಡಮುಡಿ, ರಾತ್ರಿ 8ಕ್ಕೆ ಪಯ್ಯೋಳಿ ನಡೆಯಲಿದೆ. ಏ.02 ರಂದು ರಾತ್ರಿ 7 ರಿಂದ ವಾಲಸಿರಿ, ಏ.03 ರಂದು ಮಹಾಪೂಜೆ, ಸಮಾರಾಧನೆ, ದೇವಳದಿಂದ ಉಳ್ಳಾಕುಲು ಭಂಡಾರ ಹೊರಟು ಮಂಟಪದಲ್ಲಿ ಹಿರಿಯರ ನೇಮಕ್ಕೆ ಮುಡಿಯಾಗಿ ಮಾಡದಲ್ಲಿ ನೇಮ ಮತ್ತು ಇನ್ನಿತರ ನೇಮ ನಡೆಯಲಿದೆ.

ಏ.04 ರಂದು ಸಂಜೆ 6 ರಿಂದ ಕಲ್ಕುಡ, ಪಾಷಾಣಮೂರ್ತಿ, ಕೊರಗ ತನಿಯ ದೈವಗಳ ಕೋಲ, ಏ.05ರಂದು ಪೂ.9 ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ 8 ರಿಂದ ಶ್ರೀ ಕರಿಭೂತ ಕೋಮಾಳಿ ಮಾಮೂಲು ಕೋಲಗಳು, ಏ.06 ರಂದು ರಾತ್ರಿ 8 ಗಂಟೆಯಿಂದ ಶ್ರೀ ಕರಿಭೂತ ಕೋಮಾಳಿ ಮಾಮೂಲು ದೈವಗಳ ಹರಿಕೆ ಕೋಲ, ಏ.07 ರಂದು ರಾತ್ರಿ 7 ರಿಂದ ಗುಳಿಗ ಕೋಲ, ಏ.09ರಂದು ರಾತ್ರಿ 8 ಗಂಟೆಯಿಂದ ಒತ್ತೆಕೋಲಕ್ಕೆ ಕೂಡುವುದು, ಭಂಡಾರ ತೆಗೆಯುವುದು, ಮೇಲೇರಿ ಕುಳ್ಳಾಟ, ಏ.10 ರಂದು ಬೆಳಿಗ್ಗೆ 5.30 ರಿಂದ ವಿಷ್ಣುಮೂರ್ತಿ ಒತ್ತೆಕೋಲ, ರುದ್ರಚಾಮುಂಡಿ ಕೋಲ, ಪ್ರಸಾದ ವಿತರಣೆ, ಮಾರಿಕಳ.
ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮ:
ಏ.02 ರಂದು ಸಂಜೆ 5.45 ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ. ಏ.05ರಂದು ರಾತ್ರಿ 9.30 ರಿಂದ ಶ್ರೀ ಶಾಸ್ತಾವು ಯಕ್ಷಗಾನ ಕಲಾ ಸಂಘ ಪೆರಾಜೆ, ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಮಿತಿ ಪೆರಾಜೆ ಮತ್ತು ನುರಿತ ಕಲಾವಿದರಿಂದ ಭೀಮಶಂಕರ ಮಹಿಮೆ ಯಕ್ಷಗಾನ ಬಯಲಾಟ.
ಏ.09 ರಂದು ರಾತ್ರಿ 7ರಿಂದ ಸಾರ್ವಜನಿಕ ಪುರುಷರ ಮುಕ್ತ ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟ ನಡೆಯಲಿದೆ.
ಜಾತ್ರೋತ್ಸವಕ್ಕೆ ಸಿದ್ಧತೆ:
ಜಾತ್ರೋತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿದೆ.
ಈಗಾಗಲೇ ಊರಿನ ಭಕ್ತಾಭಿಮಾನಿಗಳಿಂದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ದೇವಾಲಯದ ಶ್ರಮದಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ, ಚಪ್ಪರ ನಿರ್ಮಾಣ ಕೆಲಸದಲ್ಲಿ ಭಾಗವಹಿಸದ್ದಾರೆ. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು, ದೇವತಕ್ಕರು, ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ, ಊರ ಭಕ್ತಾಭಿಮಾನಿಗಳು ನೇತೃತ್ವದಲ್ಲಿ ಸಿದ್ಧತೆ ಮಾಡಲಾಗಿದೆ.