ಪೆರಾಜೆ: ಪೆರಾಜೆ ಅಟೋ ರಿಕ್ಷಾ ನಿಲ್ದಾಣವನ್ನು ವಿರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಜು.26 ರಂದು ಉದ್ಘಾಟಿಸಿದರು.ಸುಮಾರು 5 ಲಕ್ಷ ರೂಪಾಯಿ ಅನುದಾನದಲ್ಲಿ ಪೆರಾಜೆಯ ಅಟೋ ಚಾಲಕರ ಬಹು ದಿನದ ಬೇಡಿಕೆಯಾದ ಈ ಅಟೋ ನಿಲ್ದಾಣವನ್ನು
ನಿರ್ಮಿಸಲಾಯಿತು.ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷ ಧರ್ಮಜ ಉತ್ತಪ್ಪ,ವಲಯ ಅಧ್ಯಕ್ಷ ಜಯರಾಮ, ಅಕ್ರಮ ಸಕ್ರಮ ಸದಸ್ಯೆ ತುಳಸಿ ಗಾಂಧಿ ಪ್ರಸಾದ್, ಉಮೇಶ , ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಪಿ. ಎಲ್, ಪೆರಾಜೆ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಪೆರುಮುಂಡ ,ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಾಹಿದ್ ತೆಕ್ಕಿಲ್, ಕೊಡಗು ಸಾಮಾಜಿಕ ಜಾಲತಾಣ ಅಧ್ಯಕ್ಷ ಸೂರಜ್ ಹೊಸೂರು,ಪೆರಾಜೆ ವಲಯ ಕಾಂಗ್ರೆಸ್ಅಧ್ಯಕ್ಷ ಜಯರಾಮ,ಅಬೂಬಕ್ಕರ್ ಪೆರಾಜೆ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮೊಯಿದಿನ್,ಬೇಕಲ್ ರಮಾನಾಥ್, ಅಟೋ ಚಾಲಕರು, ಸಾರ್ವಜನಿಕರು ಉಪಸ್ಥಿತರಿದ್ದರು.





