ಸುಳ್ಯ: ಇತಿಹಾಸ ಪ್ರಸಿದ್ಧ ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಮಹಾನುಭಾವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಉರೂಸ್ ಮುಬಾರಕ್ ಕಾರ್ಯಕ್ರಮವು ಜನವರಿ 9,10 ,11ರಂದು ನಡೆಯಲಿದೆ ಎಂದು
ಪೇರಡ್ಕ ಎಂ.ಜೆ.ಎಂ ಖತೀಬರಾದ ಅಹ್ಮದ್ ನಈಂ ಮಅಬರಿ ಫೈಝಿ ಹಾಗೂ ಮುಹಿಯುದ್ದೀನ್ ರಿಫಾಯಿ ದಫ್ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜ. 9 ರಂದು ಶುಕ್ರವಾರ ಜುಮಾ ನಮಾಝಿನ ಬಳಿಕ ಧ್ವಜಾರೋಹಣದೊಂದಿಗೆ ಆರಂಭಗೊಂಡು ಜನವರಿ 11 ರಂದು ನಡೆಯುವ ಸಮಾರೋಪ ಪ್ರಾರ್ಥನೆ ಮತ್ತು ಅನ್ನದಾನದೊಂದಿಗೆ ಸಮಾಪ್ತಿಗೊಳ್ಳಲಿದೆ. ನಾಡಿನ ವಿವಿಧ ಭಾಗಗಳಿಂದ ಜಾತಿ ಧರ್ಮ ಭೇದವಿಲ್ಲದೆ ಸಾವಿರಾರು ಮಂದಿ ಪಾಲ್ಗೊಳ್ಳುವ ಸುಳ್ಯ ತಾಲೂಕಿನ ಅತ್ಯಂತ ಪ್ರಸಿದ್ಧ ಧಾರ್ಮಿಕ ಕಾರ್ಯಕ್ರಮ ಪೇರಡ್ಕ ಉರೂಸ್ ಎಂದರು.
ಜ.9ರಂದು ಎಂ.ಜೆ.ಎಂ.ಪೇರಡ್ಕ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಧ್ವಜಾರೋಹಣ ನೆರವೇರಿಸುವರು.ಅಪರಾಹ್ನ 2ಕ್ಕೆ ಸಂದಲ್ ಮೆರವಣಿಗೆ, ಮಖಾಂ ಅಲಂಕಾರ, ಮತ್ತು ಕೂಟು ಪ್ರಾರ್ಥನೆ ನಡೆಯಲಿದೆ.
ಮಗ್ರಿಬ್ ನಮಾಝಿನ ಬಳಿಕ ಉರೂಸ್ ಉದ್ಘಾಟನೆ ಮತ್ತು ಖತ್ಮುಲ್ ಖುರ್ಆನ್ ದುಆಃ ನಡೆಯಲಿದೆ.ಉಸ್ತಾದ್ ಇರ್ಷಾದ್ ದಾರಿ ಮಿತ್ತಬೈಲ್ ನೇತೃತ್ವ ವಹಿಸುವರು.ಪೇರಡ್ಕ ಎಂ.ಜೆ.ಎಂ ಅಧ್ಯಕ್ಷ
ಟಿ.ಎಂ ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸುವರು. ಉಡುಪಿ ಎರ್ಮಾಳ್
ಜಾಮಿಯಾ ಮಸೀದಿ ಖತೀಬರಾದ ಉಸ್ತಾದ್ ಸಯ್ಯದ್ ಅಲಿ ಮನ್ನಾನಿ ಧಾರ್ಮಿಕ ಉಪನ್ಯಾಸ ನೀಡುವರು.

ಜ.10ರಂದು ಮಗ್ರಿಬ್ ನಮಾಝಿನ ಬಳಿಕ ನಡೆಯುವ ಸಮಾರಂಭದಲ್ಲಿ
ಎಂ.ಜೆ.ಎಂ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸುವರು.
ಖತೀಬರಾದ ಅಹ್ಮದ್ ನಈಂ ಮಅಬರಿ ಫೈಝಿ ಪೇರಡ್ಕ ಉದ್ಘಾಟಿಸುವರು.ಉಸ್ತಾದ್ ಅನ್ವರ್ ಮುಹಿಯುದ್ದೀನ್ ಹುದವಿ ಆಲುವ ಧಾರ್ಮಿಕ ಉಪನ್ಯಾಸ ನೀಡುವರು.
ಜ.11ರಂದು ಸಂಜೆ 5ಕ್ಕೆ ಮೌಲೀದ್ ಪಾರಾಯಣ ನಡೆಯಲಿದೆ. 6.45ಕ್ಕೆ
ಸರ್ವ ಧರ್ಮ ಸೌಹಾರ್ದ ಸಂಗಮ ನಡೆಯಲಿದೆ.
ಎಂ.ಜೆ.ಎಂ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸುವರು.
ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ
ಡಾ. ಲೀಲಾಧರ್ ಡಿ.ವಿ ಉದ್ಘಾಟಿಸುವರು.ಖತೀಬರಾದ ಅಹ್ಮದ್ ನಈಂ ಮಅಬರಿ ಫೈಝಿ ಪೇರಡ್ಕ ಸೌಹಾರ್ದ ಸಂದೇಶ ನೀಡುವರು. ಕಲ್ಲುಗುಂಡಿ ಚರ್ಚ್ ಧರ್ಮಗುರು ಫಾ. ಪೌಲ್ ಕ್ರಾಸ್ತಾ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ,ಯು.ಬಿ. ಚಕ್ರಪಾಣಿ,ಎಂ.ಜಿ ಸದಾಶಿವ, ಎಸ್.ಕೆ ಹನೀಫ ಮತ್ತಿತರರು ಭಾಗವಹಿಸಲಿದ್ದಾರೆ.

ಮಗ್ರಿಬ್ ನಮಾಝಿನ ಬಳಿಕ ಸಮಾರೋಪ ಸಮಾರಂಭ
ಎಂ.ಜೆ.ಎಂ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಎನ್.ಪಿ.ಎಂ ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ನೇತೃತ್ವ ವಹಿಸುವರು. ಖತೀಬರಾದ ಅಹ್ಮದ್ ನಈಂ ಮಅಬರಿ ಫೈಝಿ ಪೇರಡ್ಕ ಧಾರ್ಮಿಕ ಉಪನ್ಯಾಸ ನೀಡುವರು.
ಜ.12ರಂದು ಅ.2ಕ್ಕೆ ಪಳ್ಳಿ ನೇರ್ಚೆ ನಡೆಯಲಿದೆ. ಪ್ರತಿ ದಿನ ಧಾರ್ಮಿಕ ಪ್ರವಚನಕ್ಕೆ ಮುನ್ನ ಮದ್ರಸಾ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ನಡೆಯಲಿದೆ ಎಂದು ಅಹ್ಮದ್ ನಈಂ ಮಅಬರಿ ಫೈಝಿ ಹಾಗೂ ಅಬ್ದುಲ್ ಖಾದರ್ ಮೊಟ್ಟೆಂಗಾರ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಆರ್.ಡಿ.ಎ ನಿರ್ದೇಶಕ ಝಾಕೀರ್ ಹುಸೈನ್, ಅಕ್ಬರ್ ಕರಾವಳಿ, ಖಲೀಲ್ ಪೇರಡ್ಕ ಉಪಸ್ಥಿತರಿದ್ದರು.












