ಪಂಜ: ಶ್ರೀ ಸದಾಶಿವ ಸಪರಿವಾರ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಎ.14 ರಂದು ವಿಷು (ಸೌರ ಯುಗಾದಿ)
ಆಚರಿಸಲಾಯಿತು. ವಿಷು ಪ್ರಯುಕ್ತ ವಿಷು ಕಣಿ ದರ್ಶನ ನಡೆಯಿತು. ಸುಫಲ ವಸ್ತು ಕಾಣಿಕೆ ಸಮರ್ಪಣೆ(ವಿಷು ಕಣಿ) ಮತ್ತು

ವಿಶೇಷ ಪೂಜಾದಿ ಸೇವೆಗಳು ನಡೆಯಿತು. ಶ್ರೀ ಸದಾಶಿವ ಸಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.