ಪಂಜ: ಪಂಜ ವಲಯ ಕಾಂಗ್ರೆಸ್ ಸಭೆ ಹಿರಿಯ ಕಾಂಗ್ರೆಸ್ ನಾಯಕರಾದ ಸತ್ಯನಾರಾಯಣ ಭಟ್ ಕಾಯಂಬಾಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ

ಕುಸುಮಾದರ ಕೆರೆಯಡ್ಕ, ಲೋಕನಾಥ್ ಕೆ.ಬಿ.
ಕುಸುಮಾದರ ಕೆರೆಯಡ್ಕ, ಕಾರ್ಯದರ್ಶಿಯಾಗಿ ಲೋಕನಾಥ್ ಕೆ.ಬಿ. ಖಜಾಂಜಿಯಾಗಿ ಅಶೋಕ್ ಡಿಸೋಜ ಮತ್ತು ಜೊತೆ ಕಾರ್ಯದರ್ಶಿಯಾಗಿ ಮಹಮ್ಮದ್ ನೇಮನಕಜೆ, ಉಪಾಧ್ಯಕ್ಷರಾಗಿ ರವಿ ಚಲ್ಲಕೋಡಿ ,ರಫಿಕ್ ಸಿ.ಎಂ, ಸೆಲಿನಾ ಡಿ’ಸೋಜ, ರಾಮಚಂದ್ರ ಅಡ್ಡತೋಡು, ಜಮಾಲುದ್ದೀನ್ ಪಂಜ ಆಯ್ಕೆಯಾದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಗಪೂರ್ ಕಲ್ಮಡ್ಕ ಹಾಗೂ ಪಂಜ ಗ್ರಾಮ ಪಂಚಾಯಿತ್ ಸದಸ್ಯ ಲಕ್ಷ್ಮಣ ಬೊಳ್ಳಾಜೆ ಉಪಸ್ಥಿತರಿದ್ದರು. ಜಯರಾಮ ಕಂಬಳ ಸ್ವಾಗತಿಸಿ,ಚಿನ್ನಪ್ಪ ಸಂಕಡ್ಕ ವಂದಿಸಿದರು. ಸಭೆಯಲ್ಲಿ ಐವತೊಕ್ಲು ಮತ್ತು ಕೂತುಕುಂಜ ಗ್ರಾಮದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಇದ್ದರು.












