ಸುಳ್ಯ:ಎಸ್ಕೆ ಎಸ್ ಎಸ್ ಎಫ್ ಗೂನಡ್ಕ ಶಾಖೆ ವತಿಯಿಂದ ಸುಳ್ಯ ತಾಲೂಕಿನಲ್ಲಿ ಪ್ರಥಮ ಬಾರಿಗೆ ನಡೆದ ನೂರೇ ಅಜ್ಮೀರ್ ಆಧ್ಯಾತ್ಮಿಕ ಪ್ರಾರ್ಥನಾ ಸಂಗಮಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ತೆಕ್ಕಿಲ್ ಮೊಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆಯಿತು.ಸಾವಿರಾರು ಮಂದಿ ಭಕ್ತರು ಭಾಗವಹಿಸಿದರು. ಉಸ್ತಾದ್ ವಲಿಯುದ್ದೀನ್ ಫೈಜಿ ವಾಝಕ್ಕಾಡ್ ನೇತೃತ್ವದಲ್ಲಿ ನೂರೇ ಅಜ್ಮಿರ್ ಆಧ್ಯಾತ್ಮಿಕ ಮಜ್ಲೀಸ್ ಹಾಗೂ

ಮಜ್ಲಿಸ್ನೂರ್ ವಾರ್ಷಿಕ ಸಮಾರಂಭ ನಡೆಯಿತು. ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮವನ್ನು ಸಯ್ಯದ್ ಜಲಾಲುದ್ದೀನ್ ತಂಙಳ್ ಉದ್ಘಾಟಿಸಿ ಅಲ್ಲಾಹುವಿನ ಹೆಸರಿನಲ್ಲಿ ಹೇಳುವ ದಿಕ್ರ್ ನ್ನಿಂದ ಆತ್ಮ ಶುದ್ದೀಕರಣಗೊಂಡು ಅನುಗ್ರಹ ಪ್ರಾಪ್ತಿಯಾಗಲಿದೆ ಎಂದರು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಪೇರಡ್ಕ ಜುಮಾ ಮಸೀದಿಯ ಗೌರವಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರು ವಿಜ್ಞಾನಂ, ವಿನಯಂ, ಸೇವೆ ಎಂಬ ವೇದ ವಾಕ್ಯದೊಂದಿಗೆ ಮುನ್ನಡೆಯುತ್ತಿರುವ ಎಸ್.ಕೆ.ಎಸ್.ಎಸ್.ಎಫ್ ಸಂಘಟನೆಯು ವಿಕಾಯ, ಟ್ರೆಂಡ್ ಗಳ ಮೂಲಕ ಸಮಾಜಕ್ಕೆ ಮಾದರಿಯಾದ ಕೆಲಸವನ್ನು ಮಾಡುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಹುಸೈನ್ ದಾರಿಮಿ ರೆಂಜಿಲಾಡಿ, ಇಬ್ರಾಹಿಂ ಖಲೀಲ್ ಫೈಝಿ, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ, ಝೈನುದ್ದೀನ್ ಯಮಾನಿ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಕೆ.ಎಸ್.ಎಸ್.ಎಫ್ ಗೂನಡ್ಕ ಶಾಖೆಯ ಅಧ್ಯಕ್ಷ ಹಾಜಿ ಸಾಜಿದ್ ಅಝ್ಹರಿ ವಹಿಸಿದರು. ವೇದಿಕೆಯಲ್ಲಿ ಪೇರಡ್ಕ ಜಮಾಅತ್ ಅಧ್ಯಕ್ಷ ಆಲಿಹಾಜಿ, ಅರಂತೋಡು ಜುಮಾ ಮಸೀದಿ ಖತೀಬರಾದ ಹಾಜಿ ಇಸಾಕ್ ಬಾಖವಿ, ಅರಂತೋಡು ಜುಮಾ ಮಸೀದಿಯ ಅಧ್ಯಕ್ಷ ಅಶ್ರಫ್ ಗುಂಡಿ,ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ಅಧ್ಯಕ್ಷ ಅಬ್ದುಲ್ ಫೈಝಿ ಫೈಂಬಚ್ಚಾಲ್, ನೂರೆ ಅಜ್ಮೀರ್ ಕರ್ನಾಟಕ ಸಂಚಾಲಕ ಇಕ್ಬಾಲ್ ಬಾಳಿಲ, ಸಮಸ್ತ ಮುಖಂಡರಾದ ಇಬ್ರಾಹಿಂ ಕತ್ತರ್, ಸುನ್ನಿ ಮಹಲ್ ಫೆಡರೇಶನ್ ಅಧ್ಯಕ್ಷ ಹಮೀದ್ ಹಾಜಿ, ತಾಲೂಕು ಮದರಸ ಮಾನೇಜ್ ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ಸಂಪಾಜೆ, ಇಕ್ಬಾಲ್ ಸುಣ್ಣಮೂಲೆ, ಶಾಫಿ ದಾರಿಮಿ, ಪೇರಡ್ಕ ಜಮಾಅತ್ ಕಾರ್ಯದರ್ಶಿ ಟಿ.ಎ ಅಬ್ದುಲ್ ರಝಾಕ್ ತೆಕ್ಕಿಲ್, ಟಿ.ಎ ಮಹಮ್ಮದ್ ಕುಂಇ’ ತೆಕ್ಕಿಲ್ ಪೇರಡ್ಕ, ಅಬ್ಬಾಸ್ ಪಾಂಡಿ, ಯು.ಪಿ ಬಶೀರ್ ಬೆಳ್ಳಾರೆ, ನ್ಯಾಯವಾದಿ ಪವಾಜ್ ಕನಕಮಜಲು ಅಕ್ಬರ್ ಕರಾವಳಿ ಮೊದಲಾದವರು ಉಪಸ್ಥಿತರಿದ್ದರು.
ವಲಿಯುದ್ದೀನ್ ಫೈಝಿ ಉಸ್ತಾದ್, ಟಿ.ಎಂ. ಶಹೀದ್ತೆ ತೆಕ್ಕಿಲ್, ಜಿ.ಕೆ.ಹಮೀದ್ ರಿಯಾಝ್ ಫೈಝಿ ಉಸ್ತಾದ್,ಉಮ್ಮರ್ ಬೀಜದಕಟ್ಟೆ,ಆಲಿ ಹಾಜಿ ಅವರನ್ನು ಸ್ಮಾನಿಸಲಾಯಿತು. ಎಸ್ಕೆಎಸ್ಎಸ್ಎಫ್ ಗೂನಡ್ಕ ಶಾಖೆಯ ಪ್ರಧಾನ ಕಾರ್ಯದರ್ಶಿ ಖಾದರ್ ಮೊಟ್ಟೆಂಗಾರ್ ಸ್ವಾಗತಿಸಿದರು.ಸ್ಥಳೀಯ ಖತೀಬರಾದ ರಿಯಾಝ್ ಫೈಝಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಅಲ್ಲಿಂ ನೂರುದ್ದೀನ್ ಅನ್ಸಾರಿ ವಂಧಿಸಿದರು, ಮುನೀರ್ ದಾರಿಮಿ, ಜುರೈದ್ ತೆಕ್ಕಿಲ್ ನಿರೂಪಿಸಿದರು.
ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲೀಸ್ ಆನ್ಲೈನ್ ಮೂಲಕ ದಿನಂಪ್ರತಿ ನಡೆಯುತ್ತಿದ್ದು ಇದೊಂದು ಪ್ರಾರ್ಥನಾ ಸಂಗಮವಾಗಿದ್ದು ಲಕ್ಷಾಂತರ ಮಂದಿ ವೀಕ್ಷಿಸುತ್ತಾರೆ.ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ಈ ಕಾರ್ಯಕ್ರಮ ನಡೆಯಿತು.