ಸುಳ್ಯ: ದ.ಕ ಮತ್ತು ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ 20ನೇ ವಾರ್ಷಿಕದ ಅಂಗವಾಗಿ ಶೈಕ್ಷಣಿಕ ಸಮ್ಮೇಳನ ಮಂಗಳೂರಿನ ಪುರಭವನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಿತು,ಶಿಕ್ಷಕರ ತರಬೇತಿ,ರಾಜ್ಯಮಟ್ಟದ ಪ್ರತಿಭಾಪುರಸ್ಕಾರ,ವಿಚಾರಗೋಷ್ಠಿ, ಆಧುನಿಕ ತಂತ್ರಜ್ಞಾನದ ಮೂಲಕ
ಕಲಿಕಾ ವಿಧಾನ,ಗಣ್ಯರ ಸಮಾವೇಶ ಮೊದಲಾದ ಕಾರ್ಯಕ್ರಮಗಳು ಜರಗಿತು ಯೇನೆಪೋಯ ವಿಶ್ವವಿದ್ಯಾಲಯದ ಕುಲಪತಿ ವೈ ಅಬ್ದುಲ್ಲ ಕುಂಞಿ ಮತ್ತು ನಿಟ್ಟೆ ವಿಶ್ವ ವಿದ್ಯಾಲಯದ ಕುಲಪತಿ ವಿನಯ ಹೆಗ್ಡೆ ಸಮ್ಮೇಳನಕ್ಕೆ ಚಾಲನೆ ನೀಡಿದರು. ಶಿಕ್ಷಣ ಸಂಸ್ಥೆ ಗಳು ಮಾನ್ಯತೆ, ವೇತನ, ಇನ್ಸೂರೆನ್ಸ್, ಇ ಎಸ್ ಐ, ಭೂಮಿ ಒಡೆತನ, ಕನ್ವರ್ಷನ್ ಮೊದಲಾದ ವಿಷಯಗಳ ಸಮಸ್ಯೆಗಳು ಮತ್ತು ಪರಿಹಾರಗಳು, ಸವಾಲುಗಳು ಮತ್ತು ಅವಕಾಶ ಗಳು ಎಂಬ ವಿಚಾರ ಗೋಷ್ಠಿ ಯಲ್ಲಿ ನ್ಯಾಯವಾದಿ ಸುದರ್ಶನ್ ಸುರೇಶ, ರಾಜ್ಯ ಒಕ್ಕೂಟ ದ ಕಾರ್ಯದರ್ಶಿ ಪ್ರಭಾಕರ ಅರಸು ತುಮಕೂರು,ಮೀಫ್ ಉಪಾಧ್ಯಕ್ಷ ಕೆ. ಎಂ.ಮುಸ್ತಫ ಸುಳ್ಯ ವಿಷಯ ಮಂಡಿಸಿ ಚರ್ಚೆಯಲ್ಲಿ ಪಾಲ್ಗೊಂಡರು ವೇದಿಕೆಯಲ್ಲಿ ಅಧ್ಯಕ್ಷ ಮೂಸಬ್ಬ ಪಿ ಬ್ಯಾರಿ, ಗೌರವಾಧ್ಯಕ್ಷ ಉಮ್ಮರ್ ಟಿ. ಕೆ ಪ್ರಧಾನ ಕಾರ್ಯದರ್ಶಿ ಮೊದಲಾದವರು ಉಪಸ್ಥಿತರಿದ್ದರು