ಸುಳ್ಯ: ಬೆಟ್ಟಂಪಾಡಿ ಶ್ರೀ ಕೊರಗಜ್ಜ ದೈವದ ನೇಮೋತ್ಸವದ ಪ್ರಯುಕ್ತ ಧಾರ್ಮಿಕ ಸಭೆ ಮತ್ತು ಸನ್ಮಾನ ಕಾರ್ಯಕ್ರಮ ಮಾ.19ರಂದು ರಾತ್ರಿ ನಡೆಯಿತು. ಸ್ವಾಮಿ ಕೊರಗಜ್ಜ ದೈವಸ್ಥಾನ ಸಮಿತಿಯ ಅಧ್ಯಕ್ಷ ಚಿದಾನಂದ ವಿದ್ಯಾನಗರ ರವರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನೇಮೋತ್ಸವ ಸಮಿತಿಯ
ಅಧ್ಯಕ್ಷೆ ಲತಾ ಮಧುಸೂದನ್, ರಾಧಾಮೋಹನ, ಕಾರ್ಯದರ್ಶಿ ರವೀಶ್ ಪಡ್ಡಂಬೈಲು, ಸಮಿತಿ ಉಪಾಧ್ಯಕ್ಷ ಕೆ.ಎಸ್.ಸುನೀಲ್ ಕುಮಾರ್, ಸಮಿತಿ ಖಜಾಂಜಿ ಚಂದ್ರ ರಾವ್ ಬೆಟ್ಟಂಪಾಡಿ,ನಿರ್ದೇಶಕ ಜಗದೀಶ್ ಎಂ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಕೊರಗಜ್ಜ ದೈವಸ್ಥಾನದ ನಿರ್ಮಾಣದ ಸಂದರ್ಭದಲ್ಲಿ ಹಾಗೂ ನೇಮೋತ್ಸವ ಕಾರ್ಯಕ್ರಮಕ್ಕೆ ಸಹಕರಿಸಿದ ದಾನಿಗಳನ್ನು ಮತ್ತು ಸ್ವಯಂ ಸೇವಕರನ್ನು ಜಂಟಿ ಸಮಿತಿ ವತಿಯಿಂದ ಅಭಿನಂದಿಸಲಾಯಿತು.

ಪ್ರಮುಖರಾದ ಕೆ.ಗೋಕುಲ್ದಾಸ್, ಗುರುದತ್ ನಾಯಕ್, ಶಂಕರ ಶಾಂತಿನಗರ, ಅಜಿತ್ ಐವರ್ನಾಡು, ಶಾರದಾ ಶಿವಾಜಿನಗರ, ಶ್ರೀಧರ ಆಚಾರ್, ಜಯರಾಮ ಬೊಳಿಯಮಜಲು, ಉದಯಭಾಸ್ಕರ್, ವನಿತಾ ನಾರಾಯಣ ನಾಯ್ಕ್, ಧರಣೀಮಣಿ, ಗೀತ, ತುಳಸಿ ಮತ್ತಿತರರನ್ನು ಸನ್ಮಾನಿಸಲಾಯಿತು.
ಸಮಿತಿಯ ನಿರ್ದೇಶಕ ಅನೂಪ್ಕಮಲಾಕ್ಷ ಪೈ ಸ್ವಾಗತಿಸಿದರು. ಕಾರ್ಯದರ್ಶಿ ರವೀಶ್ ಪಡ್ಡಂಬೈಲು ವಂದಿಸಿದರು. ನಿರ್ದೇಶಕ ಗಿರೀಶ್ ಕುಂಟಿನಿ ಕಾರ್ಯಕ್ರಮ ನಿರೂಪಿಸಿದರು.

ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲಾವಿದ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ, ಬೆಟ್ಟಂಪಾಡಿ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ವೈಭವ, ಭಜನೆ ನಡೆಯಿತು.







