ಸುಳ್ಯ:ಕೋಲ್ಚಾರು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬದುಕಿನ ಶಿಕ್ಷಣದ ಪರಿಕಲ್ಪನೆಯಲ್ಲಿ ತಿಂಗಳ 2ನೇ ಶನಿವಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಶಾಲೆಗೆ ಬಂದು ತಮ್ಮಲ್ಲಿರುವ ಕಲೆಗಳನ್ನು ಮಕ್ಕಳಿಗೆ ಪರಿಚಯಿಸಿ ತರಬೇತಿಗೊಳಿಸುವ ವಿನೂತನ ಕಾರ್ಯಕ್ರಮ “ಪ್ರೇರಣಾ” ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾರ್ ಕೆ.ಆರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸುದರ್ಶನ ಪಾತಿಕಲ್ಲು ವಹಿಸಿದ್ದರು. ಮುಖ್ಯಅತಿಥಿಗಳಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ನಿವೃತ ದೈಹಿಕ ಶಿಕ್ಷಣ ಶಿಕ್ಷಕಿ ನಾಗವೇಣಿ ಕೊಯಿಂಗಾಜೆ ಶುಭ ಹಾರೈಸಿದರು. ಮಿಮಿಕ್ರಿ ಮತ್ತು ಹಾಸ್ಯ ಕಲಾವಿದ ಶ್ರೀ ಪಟ್ಟಾಭಿರಾಮ ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಿಮಿಕ್ರಿ, ನೆರಳು ಬೆಳಕಿನಾಟದ ಜೊತೆಗೆ ಹಾಸ್ಯ ಹೊನಲನ್ನು ಹರಿಸಿ ಮಕ್ಕಳನ್ನು ರಂಜಿಸಿದರು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಹೇಮಾವತಿ ಕೊಯಿಂಗಾಜೆ, ಸದಸ್ಯರಾದ ಜಗದೀಶ್ ಕೂಳಿಯಡ್ಕ, ವಿನೋದ ಕುಮಾರಿ, ಅಶ್ವಿತಾ ಕಣಕ್ಕೂರು, ಅಂಗನವಾಡಿ ಶಿಕ್ಷಕಿ ರತ್ನಾವತಿ ವಾಲ್ತಾಜೆ, ಹಳೇವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರದೀಪ್ ಕೊಲ್ಲರಮೂಲೆ, ನವಜ್ಯೋತಿ ಯುವಕ ಮಂಡಲ ಅಧ್ಯಕ್ಷ ಕಮಲಾಕ್ಷ ಕೊಯಿಂಗಾಜೆ, ಆಶಾ ಕಾರ್ಯಕರ್ತೆ ಶಾಲಿನಿ ಪರಮಂಡಲ, ಆಶಾ ಕೊಲ್ಚಾರ್, ಪಲ್ಲವಿ ಪಾತಿಕಲ್ಲು, ಪ್ರಶಿತಾ ಕೊಲ್ಲರ ಮೂಲೆ, ಪ್ರಸನ್ನ ಕೊಯಿಂಗಾಜೆ, ನಿತೀಶ್ ಕೋಲ್ಚಾರು, ಅಜೀತ್ ಕೂರ್ನಡ್ಕ, ಶಿವಪ್ರಸಾದ್ ಕೆ ವಿ ಕೋಲ್ಚಾರ್, ಪವಿತ್ರ ಪಾಲಾರು, ಪ್ರಮೀಳಾ ಹೊಸಗದ್ದೆ, ಸೌಮ್ಯ ಕೊಯಿಂಗಾಜೆ, ಭಾರತಿ ಕುಂಭಕೋಡು, ಚಂಚಲಾಕ್ಷಿ ಹಾಸ್ಪರೆ, ಶಿಕ್ಷಕಿಯಾರದ ಮಮತಾ ಕೆ.ವಿ , ವಿನುತಾ ಕೋಲ್ಚಾರು, ಶೀಲಾ ಕೊನ್ನೊಡಿ ಮತ್ತು ಲೋಕೇಶ್ವರಿ ಕೋಲ್ಚಾರು ಉಪಸ್ಥಿತರಿದ್ದರು.ಶಾಲಾ ವಿದ್ಯಾರ್ಥಿ ನಿತಿಕ್ ಬಿ.ಎಚ್ ಪ್ರಾರ್ಥಿಸಿದರು. ಶಾಲಾ ಶಿಕ್ಷಕಿ ಜಾಲಜಾಕ್ಷಿ ಪ್ರಸ್ತಾವನೆ ಮತ್ತು ಸ್ವಾಗತಿಸಿ ಶಿಕ್ಷಕ ರಂಗನಾಥ ಎಂ ಎಸ್ ವಂದಿಸಿದರು.