ತಿರುವನಂತಪುರ:ಕಾಂಗ್ರೆಸ್ (ಎಸ್) ಪಕ್ಷದ ರಾಮಚಂದ್ರನ್ ಕಡನ್ನಪಳ್ಳಿ ಮತ್ತು ಕೇರಳ ಕಾಂಗ್ರೆಸ್ (ಬಿ) ಪಕ್ಷದ ಕೆ.ಬಿ. ಗಣೇಶ್ ಕುಮಾರ್ ಅವರು ಸಿಪಿಎಂ ನೇತೃತ್ವದ ಎಲ್ಡಿಎಫ್ ಸರ್ಕಾರದ ಸಚಿವರಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.ರಾಜಭವನದಲ್ಲಿ ನಡೆದ

ಗಣೇಶ್ ಕುಮಾರ್ ಮತ್ತು ರಾಮಚಂದ್ರನ್ ಕಡನ್ನಪಳ್ಳಿ
ಸಮಾರಂಭದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ಮೈತ್ರಿಕೂಟದ ತೀರ್ಮಾನದ ಪ್ರಕಾರ ಡೆಮಾಕ್ರಟಿಕ್ ಕೇರಳ ಕಾಂಗ್ರೆಸ್ ಪಕ್ಷದ ಆಂಟನಿ ರಾಜು ಮತ್ತು ಇಂಡಿಯನ್ ನ್ಯಾಷನಲ್ ಲೀಗ್ನ ಅಹಮ್ಮದ್ ದೇವರಕೋವಿಲ್ ಅವರು ಈಚೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.









