ಧರ್ಮಸ್ಥಳ: ತುಳುನಾಡಿನ ಜನಪ್ರಿಯ ಜಾನಪದ ಕ್ರೀಡೆಯಾದ ಕಂಬಳದ ಬಗ್ಗೆ ರೂಪಿಸಿದ ತುಳು ಚಲನಚಿತ್ರ “ಬಿರ್ದ್ದ ಕಂಬುಳ’ (ಕನ್ನಡ : ವೀರ ಕಂಬಳ) ಫೆ. 27 ರಂದು ಬಿಡುಗಡೆಯಾಗಲಿದೆ ಎಂದು ಕನ್ನಡ ಚಲನಚಿತ್ರ ರಂಗದ ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ತಿಳಿಸಿದ್ದಾರೆ.
ಅವರು ಧರ್ಮಸ್ಥಳದಲ್ಲಿ ವಸಂತಮಹಲ್ನಲ್ಲಿ ‘ಬಿರ್ದ್ದ ಕಂಬುಳ’ಚಲನಚಿತ್ರದ ಪ್ರಾಯೋಗಿಕ ಪ್ರದರ್ಶನದ ಬಳಿಕ
ಮಾತನಾಡಿದರು.ತುಳು ರಂಗಭೂಮಿ ನಿರ್ದೇಶಕ ವಿಜಯ ಕೊಡಿಯಾಲಬೈಲ್ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಆದಿತ್ಯ ಹೀರೊ ಆಗಿದ್ದಾರೆ.ಖ್ಯಾತ ನಟರಾದ ಪ್ರಕಾಶ್ರಾಜ್, ರವಿಶಂಕರ್, ಆದಿತ್ಯ, ನಟಿ ರಾಧಿಕಾಚೇತನ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ.
ತುಳು ಚಿತ್ರರಂಗದ ನವೀನ್ ಡಿ. ಪಡೀಲ್, ಗೋಪಿನಾಥ ಭಟ್ ಮೊದಲಾದವರು ನಟಿಸಿದ್ದಾರೆ.
ತುಳುನಾಡಿನ ಭವ್ಯಸಂಸ್ಕೃತಿ ಮತ್ತು ಹಿನ್ನೆಲೆಯನ್ನು ಪ್ರತಿಬಿಂಬಿಸುವ ಕಂಬಳದ ಬಗ್ಗೆ ಪರ, ವಿರೋಧ ಚರ್ಚೆ, ಪರ-ವಿರೋಧ ವಾಗ್ವಾದ, ಕೋಳಿ ಅಂಕ, ಜಮೀನುದಾರಿಕೆ, ಕೃಷಿ ಪರಂಪರೆ, ನಂಬಿಕೆ-ನಡವಳಿಕೆ ಇತ್ಯಾದಿಗಳ ಭಾವಪೂರ್ಣ ಪ್ರದರ್ಶನದೊಂದಿಗೆ “ಕಂಬುಳ” ಉತ್ತಮವಾಗಿ ಮೂಡಿ ಬಂದಿದೆ.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ. ಹೆಗ್ಗಡೆಯವರು, ದೇವಳ ನೌಕರರು, ಊರಿನ ನಾಗರಿಕರು, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳು “ಕಂಬುಳ” ವೀಕ್ಷಿಸಿದರು.
ಚಲನಚಿತ್ರದ ಬಗ್ಯೆ ಮೆಚ್ಚುಗೆ ವ್ಯಕ್ತಪಡಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಚಲನಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರನ್ನು ಗೌರವಿಸಿ, ಅಭಿನಂದಿಸಿದರು.







