ಸುಳ್ಯ:ಭಾರತೀಯ ಮಜ್ದೂರ್ ಸಂಘ ಸಂಯೋಜಿತ ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘದ ನೇತೃತ್ವದಲ್ಲಿ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ದೇವರ ಜಾತ್ರೋತ್ಸವಕ್ಕೆ ಹಸಿರು ವಾಣಿ ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ
ಸಂಘದ ಅಧ್ಯಕ್ಷ ಪ್ರಕಾಶ್ ಎಂ.ಎಸ್, ಪ್ರದಾನ ಕಾರ್ಯದರ್ಶಿ ನಾರಾಯಣ ಎಸ್.ಎಂ., ಕೋಶಾಧಿಕಾರಿ ರವಿ ಎಸ್, ಸಂಘಟನಾ ಕಾರ್ಯದರ್ಶಿ ಸುಂದರ ಪೆರಾಜೆ ಉಪಾಧ್ಯಕ್ಷ ಪ್ರಶಾಂತ್ ಭಟ್, ಜೊತೆ ಕಾರ್ಯದರ್ಶಿ ಸುರೇಂದ್ರ ಕಾಮತ್ ನಿಕಟ ಪೂರ್ವ ಅಧ್ಯಕ್ಷರಾದ ರಾಧಾಕೃಷ್ಣ ಬೈತಡ್ಕ, ವಿಜಯ ಕುಮಾರ್ ಉಬರಡ್ಕ, ನಿರ್ದೇಶಕರಾದ ಜನಾರ್ದನ ಕೆ, ಜಯರಾಮ ಕುಲಾಲ್, ಲೋಕೇಶ್, ಭಾನುಪ್ರಕಾಶ್, ವೇಣು ಗೋಪಾಲ ನಾಯರ್, ಶಂಕರ, ರೋಹಿತ್, ಚಾಮಯ್ಯ, ನಿತ್ಯಾನಂದ, ಶಿವಾನಂದ, ಮಹೇಶ್, ಪ್ರಸನ್ನ, ಪ್ರದೀಪ, ಜಗದೀಶ್, ಭಾಸ್ಕರ ಹಾಗೂ ಚಾಲಕ ಸದಸ್ಯರು ಉಪಸ್ಥಿತಿಯಲ್ಲಿ ಶ್ರೀ ದೇವರಿಗೆ ಹಸಿರುವಾಣಿ ಸಮರ್ಪಿಸಲಾಯಿತು.












