ಸುಳ್ಯ: ಸುಳ್ಯ ತಾಲೂಕು ಜಾಲ್ಸೂರು -ಅಡ್ಕಾರು ಎಂಬಲ್ಲಿ ಪಯಸ್ವಿನಿ ನದಿ ತಟದಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ಔಲಿಯಾಗಳ ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು ಎಪ್ರಿಲ್ 12 ರಿಂದ 14ರ ತನಕ ರಾತ್ರಿ 8 ರಿಂದ ಖುದ್ವತ್ತುಸಾದಾತ್ ಅಸಯ್ಯದ್ ಅಸ್ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಲ್ ಅವರ ಘನ ಅಧ್ಯಕ್ಷತೆಯಲ್ಲಿ ಜಾಲ್ಲೂರು ದರ್ಗಾ ಶರೀಫ್ ವಠಾರದಲ್ಲಿ ನಡೆಯಲಿದೆ. ಎ.12ರಂದು ಸಂಜೆ 4.30ಕ್ಕೆ
ಜಾಲ್ಸೂರು ಉರೂಸ್ ಸಮಿತಿ ಅಧ್ಯಕ್ಷ ಅಬ್ಬಾಸ್ ಹಾಜಿ ಕದಿಕಡ್ಕ ಧ್ವಜಾರೋಹಣ ನೆರವೇರಿಸುವರು. ರಾತ್ರಿ ನಡೆಯುವ ಸಮಾರಂಭದಲ್ಲಿ ಸಯ್ಯದ್ ಕುಂಞಿಕೋಯ ತಂಙಳ್ ಸಅದಿ ದುಃವಾ ನೆರವೇರಿಸುವರು.ಜಾಲ್ಸೂರು ಎಂ.ಜೆ.ಎಂ ಅಧ್ಯಕ್ಷ ಜಿ.ಪಿ ಅಬ್ದುಲ್ಲಾ ಕುಂಞಿ ಅಧ್ಯಕ್ಷತೆ ವಹಿಸುವರು.ಎಂಜೆಎಂ ಜಾಲ್ಸೂರು ಖತೀಬರಾರ ಮುನೀರ್ ಸಅದಿ ಅಲ್ ಅರ್ಶದಿ ನೆಲ್ಲಿಕುನ್ನ್ ಉದ್ಘಾಟನೆ ನೆರವೇರಿಸುವರು.ಖಾರಿಹ್ ಮುಸ್ತಫಾ ಸಖಾಫಿ ತೆನ್ನಲ ಮುಖ್ಯಪ್ರಭಾಷಣ ಮಾಡುವರು. ಹಬೀಬ್ ಹಿಮಮಿ ಉಪಸ್ಥಿತರಿರುವರು.
ಎ.13 ರಂದು ದ್ಸಿಕ್ರ್ ನೇರ್ಚೆ ನಡೆಯಲಿದೆ. ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಅಲ್ ಬುಖಾರಿ ಎಣ್ಮೂರು
ದುವಾ ನೆರವೇರಿಸುವರು.ಅಬ್ದುಲ್ ರಝಾಕ್ ಅಬ್ರಾರಿ ಪತ್ತನಂತಿಟ್ಟ ಮುಖ್ಯ ಪ್ರಭಾಷಣ ನೆರವೇರಿಸುವರು.ಸಾಧಿಕ್ ಫಾಲಿಳಿ ಕುಂಬ್ರ, ಎಂಜೆಎಂ ಪ್ರ.ಕಾರ್ಯದರ್ಶಿ ಸಿಪಿ ರಝಾಕ್ ಉಪಸ್ಥಿತರಿರುವರು.
ಎ.14ರಂದು ಸಮಾರೋಪ ಸಮಾರಂಭ ನಡೆಯಲಿದೆ.
ಮೌಲುದ್ ಮಜ್ಜಿಸ್ ನೇತೃತ್ವವನ್ನು ಖುದ್ವತ್ತುಸಾದಾತ್ ಅಸ್ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ವಹಿಸುವರು.
ಶೈಖುನಾ ಮಹ್ಮೂದುಲ್ ಫೈಝಿ ವಾಲೆಮುಂಡೋವ್ ದುಃವಾ ನೆರವೇರಿಸುವರು.ಉರೂಸ್ ಸಮಿತಿ ಅಧ್ಯಕ್ಷ
ಅಬ್ಬಾಸ್ ಹಾಜಿ ಕದಿಕಡ್ಕ ಅಧ್ಯಕ್ಷತೆ ವಹಿಸುವರು. ಲುಕ್ಮಾನುಲ್ ಹಕೀಂ ಸಖಾಫಿ ಪುಲ್ಲಾರ ಮುಖ್ಯ ಭಾಷಣ ಮಾಡುವರು.ಎಂಜೆಎಂ ಜಾಲ್ಸೂರು ಖತೀಬರಾದ ಮುನೀರ್ ಸಅದಿ ಅಲ್ ಅರ್ಶದಿ ನೆಲ್ಲಿಕುನ್ನ್ ಉಪಸ್ಥಿತರಿರುವರು.
ಎ.13 ರಂದು ದ್ಸಿಕ್ರ್ ನೇರ್ಚೆ ಹಾಗೂ ತಬರುಸ್ ವಿತರಣೆ, ಸಮಾರೋಪ ದಿನ ಅಸರ್ ನಮಾಝಿನ ಬಳಿಕ ಮೌಲೂದ್ ಪಾರಾಯಣ ರಾತ್ತಿ ಅನ್ನದಾನ ವಿತರಣೆ ನಡೆಯಲಿದೆ ಎಂದು ಉರೂಸ್ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.