ಐವರ್ನಾಡು: ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಡಿ.22 ರಂದು ನಡೆಯುವ ಚುನಾವಣೆಗೆ 12 ಸ್ಥಾನಕ್ಕೆ 36 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 39 ಮಂದಿ ನಾಮಪತ್ರ ಸಲ್ಲಿಸಿದ್ದು ಮೂರು ಮಂದಿ ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.ಕಣದಲ್ಲಿ ಹಾಲಿ ಅಧ್ಯಕ್ಷ ಎಸ್.ಎನ್.ಮನ್ಮಥ ನೇತೃತ್ವದ ತಂಡದ 12 ಮಂದಿ ಅಭ್ಯರ್ಥಿಗಳು, ಬಿಜೆಪಿ ಬೆಂಬಲಿತ 12 ಮಂದಿ ಹಾಗೂ
ಕಾಂಗ್ರೆಸ್ ಬೆಂಬಲಿತ ,12 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಎಸ್.ಎನ್.ಮನ್ಮಥರ ನೇತೃತ್ವದ ತಂಡದಲ್ಲಿ ಎಸ್.ಎನ್ .ಮನ್ಮಥ, ಸತೀಶ್ ಎಡಮಲೆ, ಮಹೇಶ್ ಜಬಳೆ, ಅನಂತಕುಮಾರ್ ಖಂಡಿಗೆಮೂಲೆ, ನಟರಾಜ ಸಿ ಕೂಪ್, ಮಧುಕರ ನಿಡುಬೆ, ರವಿನಾಥ ಮಡ್ತಿಲ, ಗೋಪಾಲಕೃಷ್ಣ ಚೆಮ್ನೂರು, ಚಂದ್ರಶೇಖರ, ಭವಾನಿ ಮಡ್ತಿಲ, ದಿವ್ಯಾ ರಮೇಶ್, ಪುರಂದರ ಕಣದಲ್ಲಿದ್ದಾರೆ.
ಬಿಜೆಪಿ ಗ್ರಾಮ ಸಮಿತಿ ಬೆಂಬಲಿತ ಅಭ್ಯರ್ಥಿಗಳಾಗಿ ಶ್ರೀನಿವಾಸ ಮಡ್ತಿಲ, ಕಿಶನ್ ಜಬಳೆ, ಅಜಿತ್ ಐವರ್ನಾಡು, ದೇವದಾಸ್ ಕತ್ಲಡ್ಕ, ಗಣೇಶ್ ಕೊಚ್ಚಿ, ಅನಿಲ್ ದೇರಾಜೆ, ಪ್ರದೀಪ್ ಪಾಲೆಪ್ಪಾಡಿ, ನವೀನ್ ಸಾರಕರೆ, ಪ್ರವೀಣ್ ಕುಮಾರ್, ಮಾಯಿಲಪ್ಪ, ಲೀಲಾವತಿ ಸಿ.ಎಸ್, ರಾಜೀವಿ ಪರ್ಲಿಕಜೆ ಇವರು ಕಣದಲ್ಲಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ರಾಜೇಶ್ ಎಂ.ಜಿ, ಸತೀಶ್ ಕತ್ಲಡ್ಕ, ಪ್ರಮೋದ್ ಆರಿಕಲ್ಲು, ಆಶಾ ಎಂ.ಎಸ್., ದೇವಿ ಕುಮಾರಿ, ಚಂದ್ರಕುಮಾರೇಶನ್,ಕೇಶವ ನಾಯ್ಕ ಉದ್ದಂಪಾಡಿ , ಮಂಜುನಾಥ ಮಡ್ತಿಲ, ಕಣ್ಣ ಪಾಟಾಳಿ, ಕರುಣಾಕರ ಮಡ್ತಿಲ ಮತ್ತು ಅಶ್ವಥ್ ಕುಮಾರ್ ಕಣದಲ್ಲಿದ್ದಾರೆ.
ಈ ಹಿಂದೆ ಗ್ರಾಮ ಪಂಚಾಯತ್ ಚುನಾವಣೆ ನಡೆದ ಸಂದರ್ಭದಲ್ಲಿ ಎಸ್.ಎನ್.ಮನ್ಮಥರ ನೇತೃತ್ವದ ಸ್ವಾಭಿಮಾನಿ ಬಿಜೆಪಿ ಬಣ ಮತ್ತು ಬಿಜೆಪಿ ಗ್ರಾಮ ಸಮಿತಿ ನೇತೃತ್ವದ ಬಣ ಸ್ಪರ್ಧಿಸಿದ್ದವು ಅದರಲ್ಲಿ ಮನ್ಮಥರ ನೇತೃತ್ವದ ತಂಡ ಪೂರ್ಣ ಬಹುಮತ ಪಡೆದಿತ್ತು.