ಬೆಂಗಳೂರು: ಮೈಸೂರು, ದಕ್ಷಿಣ ಕನ್ನಡ, ಚಿತ್ರದುರ್ಗ ಒಳಗೊಂಡಂತೆ ಒಂಬತ್ತು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ 21 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಅವರಿಗೆ ದ.ಕ.ಜಿಲ್ಲಾಧಿಕಾರಿಯ ಹೊಣೆ ನೀಡಲಾಗಿದೆ.
ಕಪಿಲ್ ಮೋಹನ್–ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಪ್ರವಾಸೋದ್ಯಮ
ಇಲಾಖೆ. ಟಿ.ಕೆ. ಅನಿಲ್ಕುಮಾರ್–ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ, ಭೂಮಿ). ಎನ್.ವಿ. ಪ್ರಸಾದ್–ಕಾರ್ಯದರ್ಶಿ, ಕಾರ್ಮಿಕ ಇಲಾಖೆ.
ಎನ್. ಜಯರಾಮ್–ಕಾರ್ಯದರ್ಶಿ, ಕಂದಾಯ ಇಲಾಖೆ. ಬಗಾದಿ ಗೌತಮ್– ನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ. ಪಿ.ಐ. ಶ್ರೀವಿದ್ಯಾ– ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಇ–ಆಡಳಿತ. ಡಿ.ಎಸ್. ರಮೇಶ್–ಜಿಲ್ಲಾಧಿಕಾರಿ, ಚಾಮರಾಜನಗರ. ಎಚ್.ಎನ್. ಗೋಪಾಲಕೃಷ್ಣ– ಜಿಲ್ಲಾಧಿಕಾರಿ, ಮಂಡ್ಯ. ಕೆ.ಎಂ.ಜಾನಕಿ–ಹೆಚ್ಚುವರಿ ನಿರ್ದೇಶಕಿ, ಸಕಾಲ. ಕೆ.ವಿ.ರಾಜೇಂದ್ರ–ಜಿಲ್ಲಾಧಿಕಾರಿ, ಮೈಸೂರು.
ಎಸ್. ಅಶ್ವಥಿ– ಆಯುಕ್ತೆ, ಪಶುಸಂಗೋಪನೆ ಮತ್ತು ಪಶುವೈದ್ಯ ಸೇವೆಗಳು. ಮುಲ್ಲೈ ಮುಹಿಲನ್– ಆಯುಕ್ತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ.
ಪ್ರಭುಲಿಂಗ ಕವಲಿಕಟ್ಟಿ– ಜಿಲ್ಲಾಧಿಕಾರಿ, ಉತ್ತರಕನ್ನಡ. ಎಂ.ಎಸ್. ದಿವಾಕರ–ಮುಖ್ಯಕಾರ್ಯನಿರ್ವಹಣಾಧಿಕಾರಿ, ಜಿಪಂ, ಚಿತ್ರದುರ್ಗ. ಜಿ.ಆರ್.ಜೆ. ದಿವ್ಯಪ್ರಭು– ಜಿಲ್ಲಾಧಿಕಾರಿ, ಚಿತ್ರದುರ್ಗ. ನಳಿನಿ ಅತುಲ್–ಅಧ್ಯಕ್ಷ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ.
ರಘುನಂದನ್ ಮೂರ್ತಿ– ಜಿಲ್ಲಾಧಿಕಾರಿ, ಹಾವೇರಿ. ಕುಮಾರ– ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ. ಭನ್ವರ್ ಸಿಂಗ್ ಮೀನಾ– ಪರೀಕ್ಷಾ ನಿಯಂತ್ರಕ, ಕರ್ನಾಟಕ ಲೋಕಸೇವಾ ಆಯೋಗ. ಪ್ರಕಾಶ್ ಜಿಟಿ ನಿಟ್ಟಾಲಿ– ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಎಸ್. ಆಕಾಶ್–ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಪಂ. ಕೊಡಗು.