ಗೂನಡ್ಕ: ಕೆಎಂಜೆ, ಎಸ್ವೈಎಸ್, ಎಸ್ಎಸ್ಎಫ್, ಸುನ್ನೀ ಸಂಘ ಸಂಸ್ಥೆಗಳ ವತಿಯಿಂದ ಹಜ್ಜ್ ಯಾತ್ರಾರ್ಥಿಗಳಾದ ಕೆಂಜೆ ಗೂನಡ್ಕ ಯುನಿಟ್ ಉಪಾಧ್ಯಕ್ಷ ಅಬ್ದುಲ್ಲಾ ಮುಸ್ಲಿಯಾರ್ ಮತ್ತು ಇಸ್ಮಾಯಿಲ್ ಅಡಿಮಾರಡ್ಕ ರವರಿಗೆ ಬೀಳ್ಕೊಡುಗೆ ಸಮಾರಂಭ ಹಯಾತುಲ್ ಇಸ್ಲಾಂ ಮದ್ರಸ ಗೂನಡ್ಕದಲ್ಲಿ ನಡೆಯಿತು ದುವಾ ಕಾರ್ಯಕ್ರಮವನ್ನು ಜಮಾ
ಆತ್ ಖತೀಬಾರಾದ ಮುಹಮ್ಮದ್ ಅಲಿ ಸಖಾಫಿ ನೆರವೇರಿಸಿದರು. ಸಿದ್ಧೀಕ್ ಗೂನಡ್ಕ ಅತಿಥಿಗಳನ್ನು ಸ್ವಾಗತಿಸಿದರು ಎಸ್ವೈಎಸ್ ಗೂನಡ್ಕ ಯುನಿಟ್ ಅಧ್ಯಕ್ಷರಾದ ಹನೀಫ್ ಜೈನಿ ಉದ್ಘಾಟಿಸಿದರು.ಕೆಎಂಜೆ ಗೂನಡ್ಕ ಯುನಿಟ್ ಅಧ್ಯಕ್ಷ ಮುಹಮ್ಮದ್ ಕುಂಞಿ ಗೂನಡ್ಕ ರವರು ಪ್ರಾಸ್ತಾವಿಕ ಭಾಷಣ ಮಾಡಿದರು ಅತಿಥಿ ಗಳಾಗಿ ಕೆಎಂಜೆ ಸುಳ್ಯ ಝೋನ್ ಅಧ್ಯಕ್ಷ ಹಮೀದ್ ಬೀಜಕೋಚ್ಚಿ ಪ್ರಧಾನ ಕಾರ್ಯದರ್ಶಿ ಹಮೀದ್ ಸುಣ್ಣಮೂಲೆ ಪಂಚಾಯತ್ ಸದಸ್ಯರಾದ ಅಬೂಶಾಲಿ ಗೂನಡ್ಕ, ಶೌವಾದ್ ಗೂನಡ್ಕ ಹಾಗೂ ಕೆಎಂಜೆ, ಎಸ್ವೈಎಸ್, ಎಸ್ಎಸ್ಎಫ್ ಕಾರ್ಯಕರ್ತರು ಭಾಗವಹಿಸಿದರು.ಎಸ್ವೈಎಸ್ ಸುಳ್ಯ ಸರ್ಕಲ್ ಅಧ್ಯಕ್ಷ ಲತೀಫ್ ಸಖಾಫಿ ವಂದಿಸಿದರು.