The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ
The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ

ಕುಮಾರಪರ್ವತದ ಅಕ್ಷಯ ಪಾತ್ರೆ ಗಿರಿಗದ್ದೆ ಭಟ್ಟರ ಮನೆಗೆ ವರ್ಲಿ ಅಲಂಕಾರದ ಮೆರುಗು

by ದಿ ಸುಳ್ಯ ಮಿರರ್ ಸುದ್ದಿಜಾಲ October 9, 2022
by ದಿ ಸುಳ್ಯ ಮಿರರ್ ಸುದ್ದಿಜಾಲ October 9, 2022
Share this article

*ರತ್ನಾಕರ ಸುಬ್ರಹ್ಮಣ್ಯ.
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಪರ್ವತವು ಚಾರಣಿಗರ ಸ್ವರ್ಗ.ಇಲ್ಲಿನ ಗಿರಿಗದ್ದೆಯಲ್ಲಿರುವ ಭಟ್ಟರ ಮನೆಯು ಚಾರಣಿಗರಿಗೆ ಊಟ ಉಪಹಾರ ನೀಡುವ ಅಕ್ಷಯ ಪಾತ್ರೆ. ಇದೀಗ ಭಟ್ಟರ ಮನೆಯ ಗೋಡೆಗೆ ನಮ್ಮ ಕುಡ್ಲ ಚಾರಣಿಗರ ಸಂಘದ ಉತ್ಸಾಹಿ ಯುವ ಸದಸ್ಯರು ವರ್ಲಿ ಅಲಂಕಾರ ಬಿಡಿಸುವ ಮೂಲಕ ಚಿತ್ತಾಕರ್ಷಕವಾಗಿಸಿದ್ದಾರೆ.
ಸುಬ್ರಹ್ಮಣ್ಯದಿಂದ ಸುಮಾರು 8 ಕಿ.ಮಿ ದೂರವಿರುವ ಗಿರಿಗದ್ದೆಯ ಮಹಾಲಿಂಗೇಶ್ವರ ಭಟ್ ಅವರ ಮನೆಗೆ ವರ್ಲಿ ಚಿತ್ರಾಲಂಕಾರ ಬಿಡಿಸಲು

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಸಲುವಾಗಿಯೇ ನಮ್ಮ ಕುಡ್ಲ ಚಾರಣ ಸಂಘದ ಸಂಸ್ಥಾಪಕ ಜಯರಾಮ ಪಂಬೆತ್ತಾಡಿ ನೇತೃತ್ವದಲ್ಲಿ ಬೆಟ್ಟ ಏರಿದರು. ಭಾರೀ ಮಳೆಯ ಅಬ್ಬರದ ನಡುವೆ ಬೆಟ್ಟ ಏರಿ ಆಗಸ್ಟ್ ನಲ್ಲಿ ಚಿತ್ರಾಲಂಕಾರ ಆರಂಭಿಸಿದ ಇವರು ಅಕ್ಟೋಬರ್ ಮೊದಲ ವಾರದಲ್ಲಿ ಪೂರ್ಣಗೊಳಿಸಿದ್ದಾರೆ.
ಸುಮಾರು ಎರಡು ತಿಂಗಳ ಕಾಲ ನಿರಂತರವಾಗಿ ಚಿತ್ರಕಲೆಯ ಚಿತ್ತಾರವನ್ನು ಗೋಡೆ ಮೇಲೆ ಚಿತ್ರೀಕರಿಸಿದರು. ಇದೀಗ ಗೋಡೆಗಳು ಚಿತ್ರಾಲಂಕಾರ ದಿಂದ ಕಂಗೊಳಿಸುತ್ತಿದ್ದು, ವರ್ಲಿ ಕಲೆಯ ಮೆರುಗು ಚಾರಣೀಗರನ್ನು ಸೆಳೆಯುತಿದೆ.

600 ಗಿಡ ನೆಟ್ಟ ಸಂಘ:
ಚಾರಣಿಗರಿಗೆ ಉತ್ತೇಜನ ನೀಡುವುದರೊಂದಿಗೆ ಕಳೆದ ಮೂರು ವರ್ಷಗಳಿಂದ ಕುಮಾರಪರ್ವತದಲ್ಲಿ ಸುಮಾರು 600ಕ್ಕೂ ಮಾವಿನ ಗಿಡಗಳನ್ನು ನೆಟ್ಟು ವನ ಸಮೃದ್ದಿಗೆ ತನ್ನದೇ ಕೊಡುಗೆಯನ್ನು ನಮ್ಮ ಕುಡ್ಲ ಚಾರಣ ಸಂಘ ನೀಡುತ್ತಿದೆ. ಅಲ್ಲದೆ ಕಳೆದ ಮೂರು ವರ್ಷಗಳಿಂದ ಕುಮಾರಪರ್ವತದಿಂದ ಸುಬ್ರಹ್ಮಣ್ಯ ದ ತನಕ ವರ್ಷದಲ್ಲಿ ಮೂರು ಬಾರಿ ಸ್ವಚ್ಚತಾ ಸೇವೆ ಮಾಡುತ್ತಿದೆ.ಸಂಘದ ಪರಿಶ್ರಮದಿಂದ ವಿನೂತನ ಪ್ರಯೋಗವಾಗಿ ಭಟ್ ರ ಮನೆಯ ಗೋಡೆಯು ಚಿತ್ತಾಕರ್ಷಕಗೊಂಡಿತು.
ನಮ್ಮ ಕುಡ್ಲ ಚಾರಣ ಸಂಘದ ಸಂಸ್ಥಾಪಕ
ಜಯರಾಮ ಪಂಬೆತ್ತಾಡಿ ನೇತೃತ್ವದಲ್ಲಿ ಸಂಘದ ಸದಸ್ಯರಾದ ಚಿತ್ರಕಲಾವಿದರಾದ ಉಮೇಶ್ ಎಂ.ವಿ ಪುತ್ತೂರು, ಮಿಥುನ್ ರೈ ಕಡಬ ಚಿತ್ತಾರ ಬಿಡಿಸಿದರು. ಇವರಿಗೆ ಗಿರಿಗದ್ದೆ ಮಹಾಲಿಂಗೇಶ್ವರ ಭಟ್ಟರು, ನಾರಾಯಣ ಭಟ್,ಅರಣ್ಯ ರಕ್ಷಕ ಸಜ್ಜನ್, ಅರಣ್ಯ ವೀಕ್ಷಕರಾದ ಮಿಲನ್, ವಂಶಿ, ಗುರುಕಾಂತ್, ಕಲಾವಿದ ರಾಮಚಂದ್ರ ದೇವರಗದ್ದೆ ಅವರು ಸಹಕಾರ ನೀಡಿದ್ದರು.

ಆರಂಭದಲ್ಲಿ ಮನೆಯ ಗೋಡೆಯನ್ನು ಚೆನ್ನಾಗಿ ತೊಳೆದು ಸ್ವಚ್ಚಗೊಳಿಸಲಾಯಿತು. ಬಳಿಕ ಅದಕ್ಕೆ ಬಣ್ಣ ಬಳಿಯಲಾಯಿತು.ನಂತರ ವರ್ಲಿ ಚಿತ್ರಾಲಂಕಾರ ಬಿಡಿಸಿದರು.ಮನೆಯ ಗೋಡೆಯ ಮೇಲೆ ಕುಮಾರಪರ್ವತದ ವಿಹಂಗಮ ನೋಟ, ಕುಮಾರಪರ್ವತದ ವನರಾಶಿಯ ಸ್ನಿಗ್ಧ ಸೌಂದರ್ಯ, ಕುಕ್ಕೆ ಜಾತ್ರೆಯ ಸೊಬಗು, ಕುಕ್ಕೆಯ ಗೋಪುರವನ್ನು ಮೂಡಿಸಲಾಗಿದೆ.
ಅಲ್ಲದೆ ಚಿತ್ರದ ಮೂಲಕ ಪರಿಸರ ಜಾಗೃತಿ, ಪರಿಸರ ಸ್ವಚ್ಚತೆ ಮತ್ತು ಚಾರಣ ತಾಣದ ಸ್ಚಚ್ಚತೆಯ ಅಗತ್ಯತೆಯನ್ನು ತಿಳಿಸಲಾಗಿದೆ‌. ಈ ಮೂಲಕ ಮನೆಯ ಸೌಂದರ್ಯ ಅಧಿಕವಾಗುವುದರೊಂದಿಗೆ ಚಾರಣಿಗರಿಗೆ ಜಾಗೃತಿಯ ಸಂದೇಶವು ತಲುಪಿಸಿದಂತಾಗಿದೆ.

‘ಕುಕ್ಕೆಯಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ ಕುಮಾರಪರ್ವತಕ್ಕೆ ಚಾರಣ ಮಾಡುತ್ತಿದ್ದೆ. ಉದ್ಯೋಗಕ್ಕೆ ಸೇರಿದ ಬಳಿಕ ಉದ್ಯೋಗಸ್ಥ ಚಾರಣಾಸಕ್ತರನ್ನು ಸೇರಿಸಿಕೊಂಡು ಚಾರಣ ಸಂಘ ಆರಂಭಿಸಿದೆ.ಚಾರಣ ಕ್ಷೇತ್ರದಲ್ಲಿ ಸ್ವಚ್ಚತೆ ಕಾಪಾಡುವುದು,ಪರಿಸರ ಜಾಗೃತಿ, ಅರಣ್ಯ ಸಮೃದ್ದಿಗೆ ವನಮಹೋತ್ಸವ ಸೇರಿದಂತೆ ಸಮಾಜಮುಖಿ ಸೇವೆಯನ್ನು ನಮ್ಮ ಸಂಘವು ಮಾಡುತ್ತಿದೆ.ಇದೀಗ ವಿಶೇಷವಾಗಿ ಚಾರಣಿಗರಿಗೆ ಊಟ ಉಪಹಾರ ನೀಡುವ ಗಿರಿಗದ್ದೆ ಭಟ್ ರ ಮನೆಯ ಗೋಡೆಯ ಮೇಲೆ ವರ್ಲಿ ಚಿತ್ರ ಬಿಡಿಸುವ ಮೂಲಕ ಆಕರ್ಷಕಗೊಳಿಸುವುದರೊಂದಿಗೆ ಪರಿಸರ ಜಾಗೃತಿ ಮತ್ತು ಸ್ವಚ್ಚತಾ ಜಾಗೃತಿ ಯ ಅರಿವು ಮೂಡಿಸಲಾಗಿದೆ.ಇದು ಸರ್ವ ಚಾರಣಿಗರ ಪ್ರಶಂಸೆಗೆ ಪಾತ್ರವಾಗಿದೆ’
ಜಯರಾಮ ಪಂಬೆತ್ತಾಡಿ ಸಂಸ್ಥಾಪಕರು, ನಮ್ಮ ಕುಡ್ಲ ಚಾರಣ ಸಂಘ.

ಮನೆಯ ಗೋಡೆಯ ಮೇಲೆ ಸುಂದರವಾಗಿ ವರ್ಲಿ ಅಲಂಕಾರ ಮೂಡಿ ಬಂದಿದೆ‌.ಇದು ಚಿತ್ತಾಕರ್ಷಕ ವಾಗಿದ್ದು ಮನೆಯ ಸೌಂದರ್ಯ ವನ್ನು ಇಮ್ಮಡಿಗೊಳಿಸುವುದರೊಂದಿಗೆ ಪರಿಸರ ಜಾಗೃತಿ ಯನ್ನು ಮೂಡಿಸುತಿದೆ.
-ನಾರಾಯಣ ಭಟ್ ಗಿರಿಗದ್ದೆ

ದಿ ಸುಳ್ಯ ಮಿರರ್ ಸುದ್ದಿಜಾಲ

ದಿ ಸುಳ್ಯ ಮಿರರ್‌ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್‌ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್‌ ಮಾಡಿರಿ.

previous post
ಕಾಂತಾರ -ಇತಿಹಾಸದಲ್ಲಿ ದಾಖಲಾದ ಒಂದು ದಂತ ಕಥೆ… ಸಿನಿಮಾ ಕಥೆಗಳು ಬದಲಾಗುತ್ತಿದೆ..ಪ್ರೇಕ್ಷಕರ ಅಭಿರುಚಿ ಕೂಡ….!!!
next post
ಮಹಿಳಾ ಏಷ್ಯಾಕಪ್ ಟಿ20 ಕ್ರಿಕೆಟ್: ಬಾಂಗ್ಲಾ ವಿರುದ್ಧ ಗೆದ್ದು ಸೆಮಿಫೈನಲ್‌ಗೆ ಭಾರತ

You may also like

ಗೃಹಲಕ್ಷ್ಮಿ ಯೋಜನೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಸರಕಾರ

June 7, 2023

ಅರಬ್ಬಿ ಸಮುದ್ರದಲ್ಲಿ ‘ಬಿಪರ್ಜೋಯ್’ ಚಂಡಮಾರುತ ಸೃಷ್ಟಿ: ತೀವ್ರ ಸ್ವರೂಪ ಪಡೆಯುತ್ತಿರುವ...

June 7, 2023

ಸಂಪಾಜೆಯ ನದಿಗಳಲ್ಲಿ ತುಂಬಿದ ಹೂಳು ತೆಗೆಯುವ ಕಾರ್ಯಾಚರಣೆಗೆ ಚಾಲನೆ

June 7, 2023

ಜೂ.7 ರಿಂದ ಸಂಪಾಜೆಯ ನದಿಗಳಲ್ಲಿ ತುಂಬಿದ ಹೂಳು ತೆಗೆಯುವ ಕಾರ್ಯಾಚರಣೆ...

June 6, 2023

ಸುಳ್ಯ ನಗರ ಪಂಚಾಯತ್ ಪರಿಸರ ಈಗ ತ್ಯಾಜ್ಯ ಮುಕ್ತ..! ನ.ಪಂ.ಸುತ್ತಲೂ...

June 6, 2023

ಡೆಂಗ್ಯೂ, ಮಲೇರಿಯಾ ಬಗ್ಗೆ ಮುನ್ನೆಚ್ಚರಿಕೆ ಇರಲಿ: ಡಾ. ಕುಮಾರ್

June 6, 2023

ನೈತಿಕ ಪೊಲೀಸ್​ಗಿರಿ ತಡೆಗೆ ‘ಆ್ಯಂಟಿ ಕಮ್ಯುನಲ್ ವಿಂಗ್’ ಸ್ಥಾಪನೆ: ಗೃಹ...

June 6, 2023

ಕಲ್ಲುಗುಂಡಿ: ಸಂತೆ ಮಾರುಕಟ್ಟೆ ಸಂಕೀರ್ಣ ಲೋಕಾರ್ಪಣೆ

June 6, 2023

ಸಂಪಾಜೆ ಗ್ರಾಮದ ಮೂಲಭೂತ ಅಭಿವೃದ್ಧಿಗಾಗಿ ಹೋರಾಟ: ಸಂಪಾಜೆ ಮೂಲಭೂತ ಸೌಕರ್ಯಗಳ...

June 6, 2023

ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಉಚಿತ ವಿದ್ಯುತ್: ಸಿಎಂ ಸಿದ್ದರಾಮಯ್ಯ

June 6, 2023

Leave a Comment Cancel Reply

ಇತ್ತೀಚಿನ ಸುದ್ದಿಗಳು

  • ನಗರ ಸ್ವಚ್ಛತಾ ಅಭಿಯಾನ: ಆಲೆಟ್ಟಿ ರಸ್ತೆಯಲ್ಲಿ 37ನೇ ವಾರದ ಸ್ವಚ್ಛತಾ ಕಾರ್ಯಕ್ರಮ
  • ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ
  • ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಗೃಹ ಸಚಿವ ಡಾ.ಜಿ. ಪರಮೆಶ್ವರ್ ಅವರಿಗೆ ಸನ್ಮಾನ
  • ಹನಿ‌ ಸುರಿಸಿ ಮಾಯವಾದ ವರುಣ: ಮುಂದುವರಿದ ಮಳೆಯ ಕಣ್ಣಾ ಮುಚ್ಚಾಲೆ
  • ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಭಾರತ ವಿರುದ್ಧ ಬೃಹತ್ ಮೊತ್ತದತ್ತ ಆಸ್ಟ್ರೇಲಿಯ

ನಮ್ಮ ಬಗ್ಗೆ

ದಿ ಸುಳ್ಯ ಮಿರರ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು ವೃತ್ತಿಪರ ಪತ್ರಕರ್ತರ ತಂಡ ಸುದ್ದಿಗಳನ್ನು ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಮನ ಮುಟ್ಟುವಂತೆ ಧನಾತ್ಮಕ ದೃಷ್ಠಿಕೋನದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಜನಪರ, ಅಭಿವೃದ್ಧಿ ಪರ, ಪಾರದರ್ಶಕ ಮತ್ತು ಧನಾತ್ಮಕ ಪತ್ರಿಕೋದ್ಯಮ ನಮ್ಮ ಗುರಿ. ಜನರ ಆಶೋತ್ತರಗಳಿಗೆ ಧ್ವನಿಯಾಗುವ, ಸಮಸ್ಯೆಗಳಿಗೆ ಕನ್ನಡಿಯಾಗುವ ಆಶಯ ನಮ್ಮದು.ಗ್ರಾಮೀಣ ಭಾಗದಿಂದ ಆರಂಭಗೊಂಡು ಅಂತಾರಾಷ್ಟ್ರೀಯ ಮಟ್ಟದವರೆಗಿನ ಸುದ್ದಿಗಳ ಸಮೃದ್ಧಿಯ ಜೊತೆಗೆ, ವಿಶೇಷ ಲೇಖನಗಳು,ಮಾನವಸಾಕ್ತ ವರದಿಗಳು, ಹಿರಿಯ ಪತ್ರಕರ್ತರ, ಬರಹಗಾರರ ಅಂಕಣಗಳು ನಮ್ಮ ಮೀಡಿಯಾದಲ್ಲಿ ಓದುಗರನ್ನು ಮುಟ್ಟಲಿದೆ.

ಸಂಪರ್ಕಿಸಿ

ನಮ್ಮನ್ನು ಹೀಗೆ ಸಂಪರ್ಕಿಸಿ:

ಇ-ಮೇಲ್ ಐಡಿ: thesulliamirror@gmail.com
ದೂರವಾಣಿ ಸಂಖ್ಯೆ: 9008417480

ನಮ್ಮೊಂದಿಗೆ ಸಂಪರ್ಕದಲ್ಲಿರಿ

Facebook Twitter Whatsapp

2023 - Sullia Mirror. Website made with 🧡 by The Web People.

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ