ಸುಳ್ಯ:ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರ ಪ್ರದೇಶಾಭಿವೃದ್ಧಿ ನಿಧಿ ಹಾಗೂ ನಗರ ಪಂಚಾಯತ್ ವತಿಯಿಂದ ಗಾಂಧಿನಗರದಲ್ಲಿ ನಿರ್ಮಿಸಲಾದ ಮಹಾತ್ಮಾ ಗಾಂಧಿ ರಿಕ್ಷಾ ತಂಗುದಾಣದ ಉದ್ಘಾಟನೆ ಜ.6ರಂದು ನಡೆಯಿತು.ರಾಜ್ಯ ಕಾರ್ಮಿಕರ ಕನಿಷ್ಟ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ನೂತನ ರಿಕ್ಷಾ ನಿಲ್ದಾಣವನ್ನು
ಉದ್ಘಾಟಿಸಿ ಲೋಕಾರ್ಪಣೆ ಮಾಡಿದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ,ತಹಶೀಲ್ದಾರ್ ಎಂ.ಮಂಜುಳಾ, ತಾ.ಪಂ.ಇಒ ರಾಜಣ್ಣ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಧನಂಜಯ ಅಡ್ಪಂಗಾಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ,ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ,
ನಗರ ಪಂಚಾಯತ್ನ
ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ನಗರ ಪಂಚಾಯತ್ ಮಾಜಿ ಸದಸ್ಯರಾದ ಕೆ.ಎಸ್.ಉಮ್ಮರ್, ಬಾಲಕೃಷ್ಣ ಭಟ್ ಕೊಡಂಕೇರಿ, ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೊ, ರಾಜು ಪಂಡಿತ್, ರಿಯಾಝ್ ಕಟ್ಟೆಕ್ಕಾರ್, ಡೇವಿಡ್ ಧೀರಾ ಕ್ರಾಸ್ತಾ, ಸುಮನಾ ಬೆಳ್ಳಾಳ್ಕರ್, ರಿಕ್ಷಾ ಸಂಘಟನೆಗಳ ಪ್ರಮುಖರಾದ ರಾಧಾಕೃಷ್ಣ ಪರಿವಾರಕಾನ, ಪ್ರಶಾಂತ್, ನಾರಾಯಣ ಎಸ್.ಎಂ, ಪ್ರಮುಖರಾದ ಮೂಸಾ ಕುಂಞಿ ಪೈಂಬೆಚ್ಚಾಲು,ಅಬ್ದುಲ್ ಹಮೀದ್ ಜನತಾ , ಮೆಟ್ರೋ ಉಮ್ಮರ್ ಹಾಜಿ, ಎಪಿಎಂಸಿ ಕಾರ್ಯದರ್ಶಿ ರವೀಂದ್ರ, ಕೆ.ಬಿ ಇಬ್ರಾಹಿಂ ಗಾಂಧಿನಗರ, ಶಶಿಧರ ಎಂಜೆ, ಸತ್ಯಕುಮಾರ್ ಆಡಿಂಜ, ನಂದರಾಜ್ ಸಂಕೇಶ , ಭವಾನಿಶಂಕರ್ ಕಲ್ಮಡ್ಕ, ಡಿ.ಎಂ ಶಾರೀಕ್,
ಕತ್ತರ್ ಇಬ್ರಾಹಿಂ ,ಆರ್.ಬಿ ಬಶೀರ್ ,ಇಕ್ಬಾಲ್ ಸುಣ್ಣಮೂಲೆ, ಮಹೇಶ್ ಬೆಳ್ಳಾಳ್ಕರ್ ಮತ್ತಿತರರು ಉಪಸ್ಥಿತರಿದ್ದರು.









