ಎಲಿಮಲೆ:ಪುತ್ತೂರಿನಿಂದ ಬೆಳ್ಳಾರೆಯಾಗಿ ಪೈಲಾರಿನಲ್ಲಿ ನಿಲುಗಡೆ ಗೋಳುತಿದ್ದ ಬಸ್ಸಿನ ಮಾರ್ಗವನ್ನು ಜಬಳೆಯಾಗಿ ಎಲಿಮಲೆಯವರೆಗೆ ವಿಸ್ತರಿಸಿದ್ದು ಬಸ್ಸಿನ ಓಡಾಟ ಮಾ.18ರಿಂದ ಆರಂಭಗೊಂಡಿದೆ.ಎಲಿಮಲೆಯಲ್ಲಿ ಪ್ರಮುಖರು ಸೇರಿ ಬಸ್ಗೆ
ಸ್ವಾಗತ ನೀಡಲಾಯಿತು.ರಾಧಾಕೃಷ್ಣ ಬೊಳ್ಳೂರು ಅವರು ತೆಂಗಿನಕಾಯಿ ಒಡೆಯುವ ಮೂಲಕ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಮುಖಂಡರಾದ ಮಹಮ್ಮದ್ ಇಕ್ಬಾಲ್ ಎಲಿಮಲೆ, ರಾಧಾಕೃಷ್ಣ ಬೊಳ್ಳೂರು, ಎ, ವಿ. ತೀರ್ಥರಾಮ ಅಂಬೆಕಲ್ಲು, ವೇಣುಗೋಪಾಲ ಪುನ್ಕುಟಿ, ವಿಷ್ಣು ಭಟ್ ಮೂಲೆತೋಟ, ಜಯಾನಂದ ಪಟ್ಟೆ ಧನಂಜಯ ಕೋಟೆಮೂಲೆ, ಮೋಹಿತ್ ಹರ್ಲಡ್ಕ, ಮತ್ತಿತರರು ಬಸ್ಸನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಕೃಷ್ಣಪ್ರಸಾದ್ ಪಾರೆ, ಮುರಳಿಧರ ಗೌಡ ಕೊಡ್ತುಗೂಳಿ, ಗಣೇಶ್ ಭಟ್ ಹೊನ್ನಡಿ, ರಾಜಾರಾಂ ಭಟ್, ಹೇಮನಾಥ ಕೋಡ್ತುಗುಳಿ, ಸತ್ಯನಾರಾಯಣ ಭಟ್ ಹೊನ್ನಾಡಿ, ವಿಷ್ಣು ಪ್ರಸಾದ್ ಹೊನ್ನಾಡಿ, ಚೈತನ್ಯ ದೀಕ್ಷಿತ್ ಕೇಳಪಾರೆ, ಜಯರಾಮ ಶೆಟ್ಟಿ, ಮರಗಿಲಡ್ಕ, ಬಾಲಚಂದ್ರ, ಹಾಗೂ ಪೈಲಾರು, ಗುಡ್ಡೆಮನೆ, ಕೋಡ್ತುಗೂಳಿ, ಮರ್ಗಿಲಡ್ಕ, ಬಾಜಿನಡ್ಕ, ಹೊನ್ನಡಿ, ಮತ್ತು ಏಲಿಮಲೆ ಭಾಗದ ಊರಿನವರು ಉಪಸ್ಥಿತರಿದ್ದರು