ಸುಳ್ಯ:ಸುಳ್ಯದ ಕಾಂಗ್ರೆಸ್ ಮುಖಂಡರು ಇಂದು ನಿಧನರಾದ ಆರ್ ಧ್ರುವನಾರಾಯಣ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಮುಸ್ತಫ ಮೈಸೂರಿಗೆ ತೆರಳಿ ವಿಜಯನಗರದಲ್ಲಿರುವ
ಮೃತರ ನಿವಾಸದಲ್ಲಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಧನಂಜಯ ಅಡ್ಪಂಗಾಯ’ ಧ್ರುವ ನಾರಾಯಣ್ ಅವರ ಅಗಲುವಿಕೆ ನನಗೆ ಕುಟುಂಬದ ಸದಸ್ಯನನ್ನು ಕಳೆದುಕೊಂಡಷ್ಟು ನೊಂದಿರುತ್ತೇನೆ, ಅವರು ನಮ್ಮೊಂದಿಗೆ ತೋರಿದ ಪ್ರೀತಿ ವಿಶ್ವಾಸ ವರ್ಣಿಸಲು ಶಬ್ದಗಳೇ ಇಲ್ಲ ರಾಜ್ಯಕಂಡ ಪ್ರಾಮಾಣಿಕ ಅಪರೂಪದ ರಾಜಕಾರಣಿಯ ನಷ್ಟ ರಾಜ್ಯದ ರಾಜಕೀಯದಲ್ಲಿ ಒಂದು ಶೂನ್ಯವನ್ನು ಸೃಷ್ಟಿಸಿದೆ ಎಂದು ಸಂತಾಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹಮದ್ ಮಾಜಿ ಸಚಿವರಾದ ಸೋಮಶೇಖರ ಕರ್ನಾಟಕ ಸರಕಾರದ ಸಚಿವರಾದ ಸೋಮಣ್ಣ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಸೋಮಶೇಖರ್, ತನ್ವಿರ್ ಸೇಠ್ ಮಂಜುನಾಥ್ ಬೆಂಗಳೂರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.