ಸುಳ್ಯ: ಸಾಹಿತಿ ಕೆ.ಆರ್. ವಿದ್ಯಾಧರ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಿಲಿಟ್ ಪದವಿ(ಡಾಕ್ಟರ್ ಆಫ್ ಲಿಟರೇಚರ್) ನೀಡಿದೆ. ವಿವಿಯ ನುಡಿಹಬ್ಬ ಘಟಿಕೋತ್ಸವದಲ್ಲಿ ಡಿ.ಲಿಟ್. ಪದವಿಯನ್ನು ಪ್ರದಾನ ಮಾಡಲಾಯಿತು. 2025ರ ಸಾಲಿನಲ್ಲಿ ವಿಶ್ವವಿದ್ಯಾಲಯವು
7 ವಿದ್ವಾಂಸರಿಗೆ ಡಿ.ಲಿಟ್ ನೀಡಿದ್ದು ಕೆ.ಆರ್. ವಿದ್ಯಾಧರ ಅವರ ‘1837ರ ಅಮರ ಸುಳ್ಯ ಹೋರಾಟ: ಬಹುನಾಯಕತ್ವದ ಅಧ್ಯಯನ’ಎಂಬ ಸಂಶೋಧನಾತ್ಮಕ ಮಹಾಪ್ರಬಂಧಕ್ಕೆ ಡಿಲಿಟ್ ನೀಡಲಾಗಿದೆ. ಹಾಲೇರಿ ಆಡಳಿತದ ಅಂತಿಮ ಹಂತ ಹಾಗೂ ಬ್ರಿಟಿಷರ ಒಳನುಸುಳುವಿಕೆಯ ಸಮಯದ ಅವಿಭಜಿತ ಕೊಡಗಿನ ರಾಜಕೀಯ ತುಮುಲ, ಜಾತಿ ಧ್ರುವೀಕರಣ ಮತ್ತು ಸಾಮುದಾಯಿಕ ಸಂಘರ್ಷದ ಚರಿತ್ರೆಯ ವಿಶ್ಲೇಷಣೆ ಈ ಅಧ್ಯಯನದಲ್ಲಿದೆ.