ಸುಳ್ಯ:ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಚೆಸ್ ಪಂದ್ಯಾವಳಿಯಲ್ಲಿ ಸುಳ್ಯ ಕೊಡಿಯಾಲಬೈಲು ಸರಕಾರಿ ಪ್ರಥಮ ದರ್ಜೆ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಮಂಗಳೂರು ರಥಬೀದಿ ಡಾ. ದಯಾನಂದ ಪೈ ಸತೀಶ್ ಪೈ ಮೆಮೋರಿಯಲ್ ಕಾಲೇಜಿನಲ್ಲಿ ನಡೆದ
ಪಂದ್ಯಾವಳಿಯಲ್ಲಿ ಭಾಗವಹಿಸಿದ ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮನೀಶ್ ರೈ ನಾವೂರು (ಅಂತಿಮ ಬಿ ಕಾಂ) ನೇತೃತ್ವದಲ್ಲಿ ತಿಲಕೇಶ್ ಕೆ ಆರ್ ಕಲ್ಲುಗುಂಡಿ (ಅಂತಿಮ ಬಿಕಾಂ), ಅಮೃತ ಟಿ ಎಸ್ ಕಲ್ಲುಗುಂಡಿ (ಪ್ರಥಮ ಬಿ. ಎ), ಅಮೂಲ್ಯ ಎ. ಕೆ ಜಟ್ಟಿಪಳ್ಳ (ದ್ವಿತೀಯ ಬಿ. ಕಾಂ), ಪ್ರೀತೇಶ್ ಎ ವಿ ಕಲ್ಲುಗುಂಡಿ (ಅಂತಿಮ ಬಿಕಾಂ) ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾ್ ಸತೀಶ್ ಕುಮಾರ್ ಕೆ ಆರ್ ಮಾರ್ಗದರ್ಶನ ನೀಡಿದ್ದರು.