ಸುಳ್ಯ: ಸುಳ್ಯ ನಗರದಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿದ್ದು ಇದನ್ನು ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಸುಳ್ಯ ತಹಶೀಲ್ದಾರ್ ಎಂ.ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸುಳ್ಯ ನಗರ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಕಾಟ ವಿಪರೀತವಾಗಿದ್ದು ಸಾರ್ವಜನಿಕರಿಗೆ
ತೀವ್ರ ತೊಂದರೆ ಉಂಟಾಗುತಿದೆ. ಬೀದಿ ನಾಯಿಗಳು ಸಾರ್ವಜನಿಕರನ್ನು ಹಾಗೂ ವಿದ್ಯಾರ್ಥಿಗಳನ್ನು ಅಟ್ಟಾಡಿಸಿಕೊಂಡು ದಾಳಿ ನಡೆಸುತಿದೆ. ದ್ವಿಚಕ್ರ ವಾಹನಗಳಿಗೆ ರಸ್ತೆ ಬದಿಯ ಮನೆಗಳಿಗೂ ಸಮಸ್ಯೆ ಉಂಟು ಮಾಡುತಿದೆ.ನಗರದಲ್ಲಿ ಹುಚ್ಚು ನಾಯಿ ಕಾಟವೂ ಇದೆ. ನಗರದ ವಿವಿಧ ಭಾಗಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ವಿಪರೀತ ಹಚ್ಚಳವಾಗಿದೆ. ಆದುದರಿಂದ ಬೀದಿ ನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯ
ಅಧ್ಯಕ್ಷ ಅಶೋಕ್ ಕುಮಾರ್, ಸಂಚಾಲಕ ಮುರಳಿ ಮಾವಂಜಿ, ಲವಕುಮಾರ್ ಕನ್ನಡ್ಕ, ಮೋಹನ್ ಕಲ್ಲಗುಡ್ಡೆ,ಗಿರೀಶ್ ಕಲ್ಲಗುಡ್ಡೆ,ಯೋಗೀಶ್ ಕಲ್ಲಗುಡ್ಡೆ, ವಿಜಯ ಕಾಂತಮಂಗಲ ಮತ್ತಿತರರು ಉಪಸ್ಥಿತರಿದ್ದರು