ಬಳ್ಪ:ಬಳ್ಪ ಗ್ರಾಮದ ಬುಡೆಂಗಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮಂಡಳಿ ರಚನೆಗೊಂಡಿದ್ದು, ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ಡಾ.ದೇವಿಪ್ರಸಾದ್ ಕಾನತ್ತೂರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಉಮೇಶ್ ಪೂಜಾರಿ ಬುಡೆಂಗಿ ಮತ್ತು
ನವೀನ್ ಪುಲ್ಲಡ್ಕ ಕಾರ್ಯದರ್ಶಿಯಾಗಿ ಮೋಹನ ಗುತ್ತಿಗಾರು ಹಾಗೂ ಕೋಶಾಧಿಕಾರಿಯಾಗಿ ಸಂತೋಷ್ ಕುಮಾರ್ ರೈ ಪಲ್ಲತ್ತಡ್ಕ ಆಯ್ಕೆಯಾದರು. ದೈವಸ್ಥಾನದ ಆಡಳಿತ ಮೊಕ್ತೇಸರರಾಗಿ ಕುಮಾರ ಬೆಳ್ಚಪ್ಪಾಡ ಕಡಬ, ಸುಂದರ ಬೆಳ್ಚಪಾಡ ಬುಡೆಂಗಿ ಮತ್ತು ಮೋಹನ ಬೆಳ್ಚಪಾಡ ಬುಡೆಂಗಿ ಆಯ್ಕೆಯಾದರೆ, ಆಡಳಿತ ಮಂಡಳಿ ಸದಸ್ಯರಾಗಿ

ಡಾ.ದೇವಿಪ್ರಸಾದ್ ಕಾನತ್ತೂರ್,ಮೋಹನ ಗುತ್ತಿಗಾರು,ಸಂತೋಷ್ ಕುಮಾರ್ ರೈ
ಚೆನ್ನಕೇಶವ ಭಟ್, ಮೇದಪ್ಪ ಮೂಲ್ಯ, ಪ್ರಶಾಂತ್ ಪೊಟ್ಟುಕೆರೆ, ಗಂಗಾಧರ ಎಡೋಣಿ, ಭಾಸ್ಕರ ಕೊರಪ್ಪಣೆ, ರಾಧಾಕೃಷ್ಣ ಕುಳ, ಪರಮೇಶ್ವರ ಕುಳ, ಕಾರ್ತಿಕ್ ರೈ ಬುಡೆಂಗಿ, ಪ್ರಸನ್ನ ಬಿ.ಕೆರೆ, ಜನಾರ್ಧನ ಜತ್ತಿಲ, ಮನೋಹರ ನೀರಜರಿ, ನಾರಾಯಣ ಕೊರಪ್ಪಣೆ, ಪವನ್ ಬಿ.ಕೆರೆ, ಮುರಳಿ ಕಾಮತ್, ಹರೀಶ್ ಬಿ.ಕೆರೆ, ರಮೇಶ್ ಬಿ.ಕೆರೆ, ವಿಜಯ ಬುಡೆಂಗಿ, ವಸಂತ ಬಿ.ಕೆರೆ, ಮಹೇಶ್ ಬಿ.ಕೆರೆ, ಬಿ.ಕೆರೆ ಮಹೇಶ್, ಸೀತಾರಾಮ ಬಿ.ಕೆರೆ ಮತ್ತು ನೀಲೇಶ್ವರ ಪೂಜಾರಿ ಬಿ.ಕೆರೆ ಮತ್ತು ಪ್ರೇಮನಾಥ ರೈ ಬುಡೆಂಗಿ ಆಯ್ಕೆಯಾದರು.
ಒತ್ತೆ ಕೋಲವು ಏಪ್ರಿಲ್ 11,12 ರಂದು ನಡೆಯಲಿದ್ದು, ಕೊಳ್ಳಿ ಮುಹೂರ್ತ ಮಾ. 7ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಡಾ.ದೇವಿಪ್ರಸಾದ್ ಕಾನತ್ತೂರ್ ತಿಳಿಸಿದ್ದಾರೆ.








