ಸುಳ್ಯ: ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಮತ್ತು ಕಾಸರಗೋಡು ತಾಲೂಕು ಮುಳಿಯಾರ್ ಬಳಿ ಇರುವ ಮಕ್ಕಳ ಅರೋಗ್ಯ ಸೇವೆಯ ಕೇಂದ್ರ ಅಕ್ಕರ ಫೌಂಡೇಶನ್ ವತಿಯಿಂದ ಉಚಿತ ಸೀಳುತುಟಿ ತಪಾಸಣೆ ಶಿಬಿರ ಅನ್ಸಾರ್ ಗೋಳ್ಡನ್ ಜ್ಯುಬಿಲಿ ಹಾಲ್ನಲ್ಲಿ ನಡೆಯಿತು. ಚಿಕಿತ್ಸೆಗೆ ಅರ್ಹರಿಗೆ ಉಚಿತ ಶಸ್ತ್ರ ಚಿಕಿತ್ಸೆಯನ್ನು ಮಾಡಿ
ಕೊಡಲಾಗುವುದು ಎಂದು ಅಕ್ಕರ ಫೌಂಡೇಶನ್ ಸಂಚಾಲಕ ಸುಬಿನ್ ಹೇಳಿದರು. ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆ. ಎಂ. ಮುಸ್ತಫ ಶಿಬಿರ ಉದ್ಘಾಟಸಿದರುಅಕ್ಕರ ಫೌಂಡೇಶನ್ ಪ್ರಾಜೆಕ್ಟ್ ಮ್ಯಾನೇಜರ್ ರಾಶಿದ್ ಪ್ರಸ್ತಾವಿಕವಾಗಿ ಮಾತನಾಡಿದರು. ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್ ಅಧ್ಯಕ್ಷತೆ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಅನ್ಸಾರಿಯಾ ಅನಾಥ ಮತ್ತು ನಿರ್ಗತಿಕ ಮಕ್ಕಳ ಕೇಂದ್ರದ ಅಧ್ಯಕ್ಷ ಹಾಜಿ ಕೆ. ಎಂ. ಅಬ್ದುಲ್ ಮಜೀದ್ ಜನತಾ,ಅನ್ಸಾರ್ ಪದಾಧಿಕಾರಿಗಳಾದ ಎನ್. ಎ. ಜುನೈದ್, ಹನೀಫ್ ಬಿ. ಎಂ, ಸಂಶುದ್ದೀನ್ ಕೆ. ಎಂ., ನಿರ್ದೇಶಕರುಗಳಾದ ಹಾಜಿ ಹಮೀದ್ ಜನತಾ,ಶಾಫಿ ಕುತ್ತಮೊಟ್ಟೆ,ಕೆ. ಬಿ. ಇಬ್ರಾಹಿಂ, ಬಶೀರ್ ಸಪ್ನ, ಎಸ್. ಪಿ. ಅಬೂಬಕ್ಕರ್, ಶಹೀದ್ ಪಾರೆ, ಸಿದ್ದೀಕ್ ಕಟ್ಟೆಕ್ಕಾರ್ಸ್ ಉಪಸ್ಥಿತರಿದ್ದರು. ನಿಜಾರ್ ಸಖಾಫಿ ದುವಾ ನೆರವೇರಿಸಿದರು, ಲತೀಫ್ ಸಖಾಫಿ ಗೂನಡ್ಕ ಶುಭಾಶಂಸನೆ ಮಾಡಿದರು.ಕಾರ್ಯದರ್ಶಿ ಬಿ. ಎಂ. ಹನೀಫ್ ಸ್ವಾಗತಿಸಿ, ಕಚೇರಿ ವ್ಯವಸ್ಥಾಪಕ ಮುನೀರ್ ಜಿ. ಕೆ. ವಂದಿಸಿದರು