ನವದೆಹಲಿ: ಆಪರೇಷನ್ ಸಿಂಧೂರ ಕುರಿತು ವಿವಿಧ ರಾಷ್ಟ್ರಗಳಿಗೆ ಮಾಹಿತಿ ನೀಡಲು ತೆರಳಲಿರುವ ಉನ್ನತ ಮಟ್ಟದ ನಿಯೋಗದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಸೇರಿದ್ದಾರೆ.ಕೇಂದ್ರ ಸರ್ಕಾರ 32 ದೇಶಗಳು ಮತ್ತು ಯುರೋಪಿಯನ್ ಒಕ್ಕೂಟಕ್ಕೆ ಭೇಟಿ ನೀಡಲು ಸರ್ವಪಕ್ಷಗಳ ಏಳು ನಿಯೋಗಳನ್ನು ರಚಿಸಿದೆ. ಈ ಭೇಟಿಯು ರಾಜತಾಂತ್ರಿಕ ಪ್ರಯತ್ನದ ಭಾಗವಾಗಿದೆ. ಪ್ರತಿ ತಂಡವು
ರಾಜತಾಂತ್ರಿಕರನ್ನು ಒಳಗೊಂಡಿದೆ. ಈ ನಿಯೋಗಗಳು ಭಯೋತ್ಪಾದನೆ ಕುರಿತು ಭಾರತದ ದೃಢ ಮತ್ತು ಏಕೀಕೃತ ನಿಲುವನ್ನು ವಿವರಿಸುವ ಮತ್ತು ಗಡಿಯಾಚೆಗಿನ ದಾಳಿಗಳಿಗೆ ನಿರ್ಣಾಯಕವಾಗಿ ಪ್ರತಿಕ್ರಿಯಿಸುವ ಹಕ್ಕನ್ನು ಪುನರುಚ್ಚರಿಸುವ ಗುರಿಯನ್ನು ಹೊಂದಿದೆ.ಬ್ರಿಜೇಶ್ ಚೌಟ ಅವರು ರಷ್ಯಾ, ಗ್ರೀಸ್, ಸ್ಪೇನ್, ಸ್ಲೋವೇನಿಯ, ಲ್ಯಾಟ್ವಿಯಾ ತೆರಳುವ ಕನಿಮೋಳಿ ಅವರ ತಂಡದ ಸದಸ್ಯರಾಗಿದ್ದಾರೆ.
ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಅವರು ಕೂಡ ನಿಯೋಗದ ತಂಡದಲ್ಲಿ ಸೇರಿದ್ದಾರೆ.ತೇಜಸ್ವಿ ಸೂರ್ಯ ಅವರು
ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕ ತೆರಳುವ ಶಶಿತರೂರ್ ಅವರ ತಂಡದಲ್ಲಿದ್ದಾರೆ.
