The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ
The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ

ಮಳೆ ನಿಂತ ಬಳಿಕ ಪಟ ಪಟನೆ ಉದುರುತಿದೆ ಕಾಯಿ ಅಡಿಕೆ: ವ್ಯಾಪಕವಾಗಿ ಕಂಡು ಬಂದಿದೆ ಅಡಿಕೆಗೆ ಕೊಳೆ ರೋಗ ಲಕ್ಷಣ..!

by ದಿ ಸುಳ್ಯ ಮಿರರ್ ಸುದ್ದಿಜಾಲ July 24, 2022
by ದಿ ಸುಳ್ಯ ಮಿರರ್ ಸುದ್ದಿಜಾಲ July 24, 2022
Share this article

ಸುಳ್ಯ:ಸುಮಾರು 20 ದಿನಗಳ ಕಾಲ ಬಿಡುವಿಲ್ಲದೆ ಸುರಿದ‌ ಮಳೆ ಅಲ್ಪ ಕಡಿಮೆಯಾಗಿ ಬಿಸಿಲು ಕಾಣಿಸುತ್ತಿದ್ದಂತೆ ಅಡಿಕೆ ತೋಟದಲ್ಲಿ ಕಾಯಿ ಅಡಿಕೆಗಳು ಪಟ ಪಟನೆ ಉದುರುತಿದೆ. ಕೊಳೆ ರೋಗದ ಲಕ್ಷಣವೂ ಕಂಡು ಬರುತಿದೆ ಎಂದು ಕೃಷಿಕರು ಹೇಳುತ್ತಿದ್ದಾರೆ. ಗಡಿ ಪ್ರದೇಶವಾದ ಕಲ್ಲಪಳ್ಳಿಯ ಕೃಷಿಕ ಹಾಗು ಪರಪ್ಪೆ ಬ್ಲಾಕ್ ಪಂಚಾಯತ್ ಸದಸ್ಯರಾದ ಆರ್.ಸಿ.ಅರುಣ್ ಕುಮಾರ್ ರಂಗತ್ತಮಲೆ ಅವರ ತೋಟದಲ್ಲಿ ವ್ಯಾಪಕವಾಗಿ ಅಡಿಕೆ ಉದುರಿ ಬೀಳುತ್ತಿದೆ. ಚಿಕ್ಕ ಮಿಡಿ ಅಡಿಕೆಗಳು, ಬೆಳೆದ

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಅರುಣ್ ರಂಗತ್ತಮಲೆ ಅವರ ತೋಟದಲ್ಲಿ ಉದುರಿ ಬಿದ್ದ ಅಡಿಕೆಗಳು

ಹಸಿ ಅಡಿಕೆ, ಹಣ್ಣಾಗಲು ಸಿದ್ಧವಾಗಿರುವ ಅಡಿಕೆಗಳು ಈ ರೀತಿ ಬೀಳುತ್ತಿದೆ. ಕೆಲವು ಅಡಿಕೆ ಮರಗಳಲ್ಲಿ ಒಂದೆರಡು ಅಡಿಕೆಗಳು, ಕೆಲವು ಅಡಿಕೆ ತೋಟಗಳಲ್ಲಿ ವ್ಯಾಪಕವಾಗಿ ಅಡಿಕೆ ಬೀಳುತ್ತಿದೆ. ಒಟ್ಟಿನಲ್ಲಿ ಅರ್ಧಕ್ಕಿಂತಲೂ ಹೆಚ್ಚು ತೋಟದಲ್ಲಿ ಅಡಿಕೆ ಬೀಳುತಿದೆ. ಕೊಳೆ ರೋಗದ‌ ಲಕ್ಷಣವೂ ಕಂಡು ಬರುತಿದೆ ಎಂದು ಅರುಣ್ ರಂಗತ್ತಮಲೆ ಮಾಹಿತಿ ನೀಡಿದ್ದಾರೆ. ಹಲವು ತೋಟಗಳಲ್ಲಿ ಅಡಿಕೆ ಉದುರುವುದು, ಕೊಳೆ ರೋಗದ ಲಕ್ಷಣ ಕಂಡು ಬರುತಿರುವ ಬಗ್ಗೆ ಕೃಷಿಕರು ಹೇಳುತ್ತಾರೆ. ತೋಟಕ್ಕೆ ಔಷಧಿ ಸಿಂಪಡಣೆ ಮಾಡಿದರೆ ಕೊಳೆ ರೋಗ ಬಾದೆ ಹರಡುವುದಕ್ಕೆ ಸ್ವಲ್ಪ ಮಟ್ಟಿನ ತಡೆ ಹಾಕಲು ಸಾಧ್ಯ ಎಂಬ ನಿರೀಕ್ಷೆ ಇದೆ ಎಂದು ಕೃಷಿಕರು ಹೇಳುತ್ತಾರೆ.
ಜುಲೈ ತಿಂಗಳ ಅರಂಭದಿಂದ ಸುಮಾರು 20 ದಿನಗಳ ಕಾಲ
ನಿರಂತರ ಸುರಿದ ಭಾರೀ ಮಳೆಯಿಂದ ಹಳ್ಳ ಕೊಳ್ಳ, ಹೊಳೆ, ನದಿಗಳು ತುಂಬಿ ಹರಿದ ಕಾರಣ ಹಲವು ಅಡಿಕೆ ತೋಟಗಳಿಗೆ ನೀರು ನುಗ್ಗಿ

ವಾರಗಟ್ಟಲೆ ತೋಟಗಳು ಜಲಾವೃತವಾಗಿತ್ತು. ಹೊಳೆ, ನದಿಗಳ ನೀರು ಇಳಿದರೂ ತೋಟಗಳಲ್ಲಿ ಒರತೆ, ನೀರು, ಕಣಿ ಪೂರ್ತಿ ನೀರು ತುಂಬಿ ತುಳುಕಿ ತೋಟ ಪೂರ್ತಿ ನೀರಲ್ಲಿತ್ತು. ಈ ಅವಧಿಯಲ್ಲಿ ಸುಳ್ಯ ತಾಲೂಕಿನಲ್ಲಿ ಪ್ರತಿ ದಿನ ಸರಾಸರಿ 100-150 ಮಿ.ಮಿ. ಮಳೆ ಸುರಿದಿತ್ತು. 15 ದಿನಗಳಲ್ಲಿ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ 1500 ಮಿ.ಮಿ. ಗಿಂತಲೂ ಹೆಚ್ಚು ದಾಖಲೆಯ ಮಳೆಯಾಗಿತ್ತು. 2018ರಲ್ಲಿ ಈ ರೀತಿಯ ರಣ ಭೀಕರ‌ ಮಳೆ ನಿರಂತರ ಬಂದಿತ್ತು. ಆ ವರ್ಷ ಭಾರೀ ಪ್ರಮಾಣದಲ್ಲಿ ಕೊಳೆ ರೋಗ ಬಾದಿಸಿ ಕೃಷಿ ನಾಶ ಆಗಿತ್ತು ಎಂದು ಅಡಿಕೆ ಬೆಳೆಗಾರರು ನೆನಪಿಸುತ್ತಾರೆ. ಇದೀಗ ಮಳೆ ಬಿಟ್ಟು ಅಲ್ಪ ಸ್ವಲ್ಒ ಬಿಡುವ ಸಿಗುವ ಸಂದರ್ಭದಲ್ಲಿ
ಸಾಧ್ಯವಾದಷ್ಟು ಔಷಧಿ ಸಿಂಪಡಣೆ ಮಾಡಿದರೆ ರೋಗ ಬಾದೆ ಹರಡದಂತೆ ತಡೆಯಬಹುದು ಎಂಬುದು ಕೃಷಿಕರ ನಿರೀಕ್ಷೆ.

ಮಳೆಗಾಲ ಆರಂಭಕ್ಕೆ ಮುನ್ನ ಅಡಿಕೆ ಬೆಳೆಗಾರರು ಒಂದು ಬಾರಿ ಔಷಧಿ ಸಿಂಪಡಣೆ ಮಾಡಿದ್ದರು. ಒಮ್ಮೆ ಔಷಧಿ ಸಿಂಪಡಣೆ ಮಾಡಿದರೆ ಒಂದು ಸಾವಿರ ಮಿಲಿ ಮೀಟರ್ ಮಳೆಯನ್ನು ರೋಗದಿಂದ ತಡೆಯುವ ಶಕ್ತಿ ಇರುತ್ತದೆ ಎಂಬುದು ಕೃಷಿಕರ ಲೆಕ್ಕಾಚಾರ. ಆದರೆ ಈಗ ಅದಕ್ಕಿಂತ ಹೆಚ್ಚು ಮಳೆ‌ ಸುರಿದಿರುವ ಕಾರಣ ಮತ್ತು ಅವಧಿ ಮುಗಿದಿದೆ.
ಮಳೆಗಾಲ ಆರಂಭಕ್ಕೆ ಮುನ್ನ ಹಲವು ಅಡಿಕೆ ತೋಟಗಳಲ್ಲಿ ನಳ್ಳಿ ಉದುರುವುದು ವ್ಯಾಪಕವಾಗಿ ಕಂಡು ಬಂದಿತ್ತು. ಇದರಿಂದ ಹಲವು ತೋಟಗಳಲ್ಲಿ ಭಾರೀ ಪ್ರಮಾಣದಲ್ಲಿ ಅಡಿಕೆ ನಷ್ಟ ಆಗಿತ್ತು. ಹವಾಮಾನ ವೈಪರೀತ್ಯ, ಉಷ್ಣಾಂಶದ ಏರುಪೇರು, ಫಂಗಸ್ ಬಾದೆ, ಕೀಟ ಬಾದೆಯಿಂದ‌ ಈ ರೀತಿ ನಳ್ಳಿ ಉದುರುತ್ತಿತ್ತು. ಕೆಲವೆಡೆ ಅದು ಮುಂದುವರಿದಿದ್ದು ಬೆಳೆದು ದೊಡ್ಡದಾದ ಅಡಿಕೆ ಕೂಡ ಈಗಲೂ ಬಿದ್ದು ಹೋಗುತ್ತದೆ ಎಂದು ಕೃಷಿಕರು ಹೇಳುತ್ತಾರೆ. ಕೆಲವೆಡೆ ತೋಟಗಳಲ್ಲಿ ನೀರು ನಿಂತ ಕಾರಣ ಬೇರುಗಳು ಕರಗಿ ಗಿಡಗಳು ಸಾಯುವುದು ಕಂಡು ಬರುತಿದೆ ಎಂದು ಕೃಷಿಕರು ಹೇಳುತ್ತಾರೆ.
ಈ ರೀತಿ ಕಾಯಿ ಅಡಿಕೆ ಉದುರುವುದು ಹಳದಿ ರೋಗದ ಲಕ್ಷಣವೇ ಎಂಬ ಭಯವೂ ಇದೆ ಎಂದು ಕೆಲವು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.

”ಮಳೆ ಬಿಟ್ಟ ನಂತರ ತೋಟದಲ್ಲು ವ್ಯಾಪಕವಾಗಿ ಅಡಿಕೆ ಉದುರುತಿದೆ ಮತ್ತು ಕೊಳೆರೋಗವೂ ಕಂಡು ಬಂದಿದೆ. ಚಿಕ್ಕ ಅಡಿಕೆ, ಬೆಳೆದ ಹಸಿ ಅಡಿಕೆ, ಕಾಯಿ ಅಡಿಕೆ, ಹಣ್ಣಾದ ಅಡಿಕೆಗಳು ಉದುರುತಿದೆ. ಶೇ.50ಕ್ಕೂ ಹೆಚ್ಚು ತೋಟಗಳಲ್ಲಿ ಈ ರೀತಿ ಅಡಿಕೆ ಬೀಳುತಿದೆ. ಏನು ಕಾರಣ ಗೊತ್ತಾಗುತ್ತಿಲ್ಲ”
-ಆರ್.ಸಿ.ಅರುಣ್ ಕುಮಾರ್
ರಂಗತ್ತಮಲೆ.

ದಿ ಸುಳ್ಯ ಮಿರರ್ ಸುದ್ದಿಜಾಲ

ದಿ ಸುಳ್ಯ ಮಿರರ್‌ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್‌ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್‌ ಮಾಡಿರಿ.

previous post
ಜನರನ್ನು ಓದಿನೆಡೆಗೆ ಮತ್ತೆ ಕರೆ ತರುವುದು ಮಾಧ್ಯಮಗಳ ಮುಂದಿರುವ ದೊಡ್ಡ ಸವಾಲು: ಎಂ.ನಾ.ಚಂಬಲ್ತಿಮಾರ್ ಅಭಿಮತ:ಸುಳ್ಯದಲ್ಲಿ ಪತ್ರಿಕಾ ದಿನಾಚರಣೆ: ಚಂದ್ರಾವತಿ ಬಡ್ಡಡ್ಕ ಅವರಿಗೆ ಸನ್ಮಾನ
next post
ಅಂಕಣ:ಗಡಿನಾಡ ದಡದಿಂದ.. ವಿಕಸಿತ ಸುಳ್ಯದ ನೆತ್ತಿಗೊಂದು ಸಿಂಧೂರಶೋಭೆ.. ಸರಕಾರಿ ದೇಣಿಗೆ ಇಲ್ಲ, ಜನತಾಬೆಂಬಲದಿಂದ ಅರಳುತ್ತಿದೆ ಒಂದು ಕೋಟಿಯ ಪತ್ರಿಕಾಭವನ..!

You may also like

ಹಿಂದುತ್ವಕ್ಕಾಗಿ, ಸಮಾಜದ ಉಳಿವಿಗಾಗಿ ಯಾವ ತ್ಯಾಗಕ್ಕೂ ಸಿದ್ಧ:ಅರುಣ್ ಕುಮಾರ್ ಪುತ್ತಿಲ:...

June 4, 2023

ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ: ಕರಾವಳಿ, ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ...

June 4, 2023

ಅರೆಭಾಷೆ ರಸಾಯನ: ಐತಾರದ ಪೊಳ್ಮೆ.. ಪೂರಾ ಹೆಳ್ಮಕ್ಕಳಿಗೆ ಕೊಟ್ಟರೆ ಗಳ್ಮಕ್ಕಳಿಗೆ...

June 4, 2023

ಸುಳ್ಯದ ಸ್ವಾತಿ ನರ್ಸರಿಯಲ್ಲಿ ಗುಣಮಟ್ಟದ ಅಡಿಕೆ ಗಿಡಗಳು ಮಾರಾಟಕ್ಕೆ

June 4, 2023

ಸರಕಾರದ ಗ್ಯಾರಂಟಿ ಯೋಜನೆ: ಯುವ ನಿಧಿ, ಅನ್ನಭಾಗ್ಯ ಯೋಜನೆಗಳ ಮಾರ್ಗಸೂಚಿ...

June 3, 2023

5 ಗ್ಯಾರಂಟಿ ಯೋಜನೆಗಳಂತಹಾ ಜನಪರ ಕಾರ್ಯಕ್ರಮ ನೀಡಲು ಕಾಂಗ್ರೆಸ್‌ನಿಂದ ಮಾತ್ರ...

June 3, 2023

ಬಾಲಸೋರ್ ರೈಲು ಅಪಘಾತ: ಮೃತರ ಸಂಖ್ಯೆ 233 ಕ್ಕೆ, 900...

June 3, 2023

ಒಡಿಶಾ ರೈಲು ದುರಂತ: ಮೃತರ ಕುಟುಂಬಕ್ಕೆ 10 ಲಕ್ಷ ರೂ.,...

June 2, 2023

ಒಡಿಶಾದ ಬಾಲಸೋರ್​​ನಲ್ಲಿ ರೈಲು ಅಪಘಾತ: 50 ಮಂದಿ ಸಾವು: 300...

June 2, 2023

ರಾಜ್ಯ ಸರಕಾರದ ಐದು ಗ್ಯಾರಂಟಿಗಳ ಅನುಷ್ಠಾನ ಹೇಗೆ.? ಷರತ್ತುಗಳು ಏನು..?...

June 2, 2023

Leave a Comment Cancel Reply

ಇತ್ತೀಚಿನ ಸುದ್ದಿಗಳು

  • ಸಿಎಸ್​ಕೆ ಸ್ಟಾರ್ ಬ್ಯಾಟರ್ ಋತುರಾಜ್ ಗಾಯಕ್ವಾಡ್​- ಉತ್ಕರ್ಷ ಪವಾರ್ ಮದುವೆ ಸಂಭ್ರಮ
  • ಕೇರಳದ ನರ್ಸ್‌ಗೆ ಒಲಿದ 45 ಕೋಟಿಯ ಅಬುಧಾಬಿ ಬಿಗ್ ಟಿಕೆಟ್ ಲಾಟರಿ ಅದೃಷ್ಟ
  • ಹಿಂದುತ್ವಕ್ಕಾಗಿ, ಸಮಾಜದ ಉಳಿವಿಗಾಗಿ ಯಾವ ತ್ಯಾಗಕ್ಕೂ ಸಿದ್ಧ:ಅರುಣ್ ಕುಮಾರ್ ಪುತ್ತಿಲ: ಲೋಕ‌ ಕಲ್ಯಾಣಾರ್ಥವಾಗಿ ಶ್ರೀ ಸತ್ಯನಾರಾಯಣ ಪೂಜೆ-ಧಾರ್ಮಿಕ ಸಭೆ
  • ಜಾಲ್ಸೂರಿಗೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ: ಅದ್ದೂರಿ ಸ್ವಾಗತ- ವೈಭವದ ಮೆರವಣಿಗೆ
  • ಮಾರ್ನಿಂಗ್ ಕ್ರಿಕೆಟ್‌ ಕ್ಲಬ್ ನೂತನ ಕಚೇರಿ ಉದ್ಘಾಟನೆ

ನಮ್ಮ ಬಗ್ಗೆ

ದಿ ಸುಳ್ಯ ಮಿರರ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು ವೃತ್ತಿಪರ ಪತ್ರಕರ್ತರ ತಂಡ ಸುದ್ದಿಗಳನ್ನು ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಮನ ಮುಟ್ಟುವಂತೆ ಧನಾತ್ಮಕ ದೃಷ್ಠಿಕೋನದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಜನಪರ, ಅಭಿವೃದ್ಧಿ ಪರ, ಪಾರದರ್ಶಕ ಮತ್ತು ಧನಾತ್ಮಕ ಪತ್ರಿಕೋದ್ಯಮ ನಮ್ಮ ಗುರಿ. ಜನರ ಆಶೋತ್ತರಗಳಿಗೆ ಧ್ವನಿಯಾಗುವ, ಸಮಸ್ಯೆಗಳಿಗೆ ಕನ್ನಡಿಯಾಗುವ ಆಶಯ ನಮ್ಮದು.ಗ್ರಾಮೀಣ ಭಾಗದಿಂದ ಆರಂಭಗೊಂಡು ಅಂತಾರಾಷ್ಟ್ರೀಯ ಮಟ್ಟದವರೆಗಿನ ಸುದ್ದಿಗಳ ಸಮೃದ್ಧಿಯ ಜೊತೆಗೆ, ವಿಶೇಷ ಲೇಖನಗಳು,ಮಾನವಸಾಕ್ತ ವರದಿಗಳು, ಹಿರಿಯ ಪತ್ರಕರ್ತರ, ಬರಹಗಾರರ ಅಂಕಣಗಳು ನಮ್ಮ ಮೀಡಿಯಾದಲ್ಲಿ ಓದುಗರನ್ನು ಮುಟ್ಟಲಿದೆ.

ಸಂಪರ್ಕಿಸಿ

ನಮ್ಮನ್ನು ಹೀಗೆ ಸಂಪರ್ಕಿಸಿ:

ಇ-ಮೇಲ್ ಐಡಿ: thesulliamirror@gmail.com
ದೂರವಾಣಿ ಸಂಖ್ಯೆ: 9008417480

ನಮ್ಮೊಂದಿಗೆ ಸಂಪರ್ಕದಲ್ಲಿರಿ

Facebook Twitter Whatsapp

2023 - Sullia Mirror. Website made with 🧡 by The Web People.

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ